ಹೋರಾಟಗಾರ ಲಿಂಗರಾಜ ಸಿರಗಾಪೂರ ಅವರಿಗೆ ಸನ್ಮಾನ

0
76

ಕಲಬುರಗಿ: ಕನ್ನಡ ಪರ ಹೋರಾಟಗಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ಉತ್ತರ ವಲಯ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಅವರನ್ನು ಹೈದರಾಬಾದ್ ಕರ್ನಾಟಕ ಸೋಷಿಯಲ್ ಫೋರಂ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ಉತ್ತರ ವಲಯ ಉಪಾಧ್ಯಕ್ಷ ಸಾಜೀದ ಅಲಿ ರಂಜೋಳ್ವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಕಲಬುರಗಿ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿಪಾಟೀಲ ಅವರು ಸನ್ಮಾನಿಸಿದರು.

ಸನ್ಮಾನ ಮಾಡಿ ಮಾತನಾಡಿದ ಸಾಜೀದ ಅಲಿ ರಂಜೋಳ್ವಿ ಅವರು ಸಿರಗಾಪುರ ಅವರು ಪ್ರಾಮಾಣಿಕ ಹಿರಿಯ ಹೊರಾಟಗಾರರಾಗಿದ್ದು ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.ದೇವರು ಅವರಿಗೆ ಹೆಚ್ಚು ಆಯುಷ್ಯ ಆರೋಗ್ಯ ನೀಡಲಿ.ಇನ್ನು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಎಂ.ಎ.ರಹೀಂ ಹಾಗೂ ಮಂಜುನಾಥ ಸಿರಗಾಪೂರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here