ಸೊಲ್ಲಾಪುರ-ಗುಂತಕಲ್ ರೈಲು ಪ್ರಾರಂಭ, ರಸ್ತೆ,ಚರಂಡಿ ಸಮಸ್ಯೆ ಪರಿಹಾರಕ್ಕಾಗಿ ಮನವಿ

0
22

ಚಿತ್ತಾಪುರ: ತಾಲೂಕಿನ ವಾಡಿ ಪಟ್ಟಣಕ್ಕೆ ಬುಧವಾರ ಆಗಮಿಸಿದ ಸೊಲ್ಲಾಪುರ ವಿಭಾಗದ ರೈಲ್ವೆ ವ್ಯವಸ್ಥಾಪಕರಾದ ಶೈಲೇಶ್ ಗುಪ್ತಾ ಅವರಿಗೆ ವಾಡಿ ಬಿಜೆಪಿ ಕಾರ್ಯದರ್ಶಿ ವೀರಣ್ಣ ಯಾರಿ ಮನವಿ ಪತ್ರವನ್ನು ಸಲ್ಲಿಸಿದರು.

ಕರೋನ ಕಾಲದಲ್ಲಿ ಸ್ಥಗಿತಗೊಂಡ ಸೊಲ್ಲಾಪುರ ದಿಂದ ಗುಂತಕಲ್ ಪ್ಯಾಸೆಂಜರ್ ರೈಲು ಪುನಃ ಪ್ರಾರಂಭಿಸಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದಾರೆ.

Contact Your\'s Advertisement; 9902492681

ಮಳೆಗಾಲದಲ್ಲಿ ವಾರ್ಡ್ ನಂ.20 ರ ಬಿಯಾಬಾನಿ ಏರಿಯ, ವಾರ್ಡ್ ನಂ 4 ಹಾಗು 5 ರ ರೆಸ್ಟ್ ಕ್ಯಾಂಪ್‌ ತಾಂಡಾಗಳಲ್ಲಿ ರೈಲ್ವೆ ನಿಲ್ದಾಣದಿಂದ ಚರಂಡಿ ನೀರು ಯಥೇಚ್ಛವಾಗಿ ಮನೆಗಳಿಗೆ ನುಗ್ಗುತ್ತವೆ.ಇದರಿಂದಾಗಿ ಅಲ್ಲಿನ ಜನರ ಕಷ್ಟವಾಗಿ ಅವರು ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗತ್ತಿದ್ದಾರೆ. ಹಾಗೂ ಹಲಕಟ್ಟಾ ನಿಲ್ದಾಣದ ಸಮೀಪ ರೈಲ್ವೆ ಸಂಪರ್ಕದ ಹಳಿಗಳು ಸುತ್ತುವರೆದಿದ್ದ ಮಧ್ಯ ಭಾಗದಲ್ಲಿರುವ ಹೋಲಗಳಿಗೆ ಹೋಗುವ ರೈತರಿಗೆ, ಹಳಿಯ ಪಕ್ಕದಲ್ಲಿನ ಪೋಮು ನಾಯಕ ತಾಂಡ ವಾಸಿಗಳ ಸಂಚಾರಕ್ಕೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿ ಈ ಸಮಸ್ಯೆಗಳನ್ನು ಆದಷ್ಟೂ ಬೇಗ ನಿವಾರಿಸಲು ಅಧಿಕಾರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹರಿ ಗಲಾಂಡೆ,ದೌಲತ್ ರಾವ ಚಿತ್ತಾಪುರಕರ್,ರೋಹಣ್ ನೌಗಿರೆ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here