ಸುರಪುರ: ನಗರದಲ್ಲಿ ಬೀದಿ ದನಗಳ ಕಾಟ ಹೆಚ್ಚಾಗಿದ್ದು ನಗರಸಭೆಯಿಂದ ತ್ವರಿತ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಒತ್ತಾಯಿಸಿದ್ದಾರೆ.
ನಗರದ ಮಹಾತ್ಮ ಗಾಂಧಿ ವೃತ್ತ,ಹಳೆ ಬಸ್ ನಿಲ್ದಾಣ,ಸರದಾರ್ ವಲ್ಲಭಬಾಯಿ ವೃತ್ತ ಹಾಗು ತಿಮ್ಮಾಪುರ ರಸ್ತೆಗಳಲ್ಲಿ ದಿನನಿತ್ಯವು ಬೀದಿ ದನಗಳ ಹಿಂಡು ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.ಅಲ್ಲದೆ ಅನೇಕ ಜನರು ಬೈಕ್ಗಳ ಅಪಘಾತಕ್ಕೀಡಾಗಿ ಗಾಯಗೊಂಡಿರುವ ಉದಾಹರಣೆಗಳಿವೆ.
ಇದಕ್ಕೆ ಕಡಿವಾಣ ಹಾಕಲು ಕೂಡಲೆ ನಗರಸಭೆಯಿಂದ ನಗರದಲ್ಲಿ ಪ್ರಚಾರ ನಡೆಸಿ ಜಾನುವಾರುಗಳ ಮಾಲೀಕರು ಅವುಗಳನ್ನು ತಮ್ಮ ಮನೆಗಳಲ್ಲಿ ಕಟ್ಟಿಕೊಳ್ಳುವಂತೆ ತಿಳಿಸಬೇಕು,ಇಲ್ಲವಾದಲ್ಲಿ ಅವುಗಳನ್ನು ಗೋಶಾಲೆಗಳಿಗೆ ಕಳುಹಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯಿಂದ ಮುಕ್ತಿಗೊಳಿಸಲು ಮುಖಂಡ ಸಿದ್ರಾಮ ಎಲಿಗಾರ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.