ಸೇಡಂ : ಕರೋನಾ ಮೋದಲನೇ ಹಾಗೂ ಎರಡನೇ ಅಲೆಯಿಂದ ಸಣ್ಣ ಪುಟ್ಟ ಅಂಗಡಿಯವರು ಹಾಗೂ ಬೀದಿ ಬದಿಯ ವ್ಯಾಪಾರಿಗಳು ತುಂಬಾ ಸಂಕಷ್ಟದಲ್ಲಿದ್ದಾರೆ ಅವರ ನೇರವಿಗೆ ಸರ್ಕಾರ ಬರಬೇಕು ಎಂದು ಜೆಡಿಎಸ್ ಮುಖಂಡ ಬಾಲರಾಜ ಗುತ್ತೇದಾರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೋರಡಿಸಿರುವ ಅವರು ಸಣ್ಣ ಪುಟ್ಟ ಅಂಗಡಿಯವರು, ಕರೊನಾ ದಲ್ಲಿ ತಮ್ಮ ಅಂಗಡಿಗಳು ಬಂದಮಾಡಿ ಮನೆಯಲ್ಲಿ ಕುಳಿತುಗೊಂಡಿದ ಪರಿಣಾಮ ಆ ಅಂಗಡಿಗಳ ಬಾಡಿಗೆ ಕಟ್ಟಲು ಹಾಗೂ ತಮ್ಮ ಮನೆನಡೆಸಲು , ಅಂಗಡಿಯಲ್ಲಿ ಸಾಮಾಗ್ರಿ ಸಂಗ್ರಹಿಸಲು ಹಣ ವಿಲ್ಲದೆ ಪರದಾಡುತಿದ್ದು ಅವರು ತಮ್ಮ ತಣ್ಣ ಪುಟ್ಟ ವ್ಯಾಪಾರ ಸ್ಥಗಿತಗೊಳಿಸಿ ಬೆರೆ ಯವರ ಈಡೆ ಕೂಲಿ ಕೇಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ ಕಾರಣ ಮುಖ್ಯಮಂತ್ರಿ ಗಳು ಕೂಡಲೆ ತಮ್ಮ ನಿಧಿಯಿಂದ ಹಾಗೂ ವಿವಿಧ ಸಮುದಾಯಗಳ ಅಭಿವೃದ್ದಿ ಮಂಡಳಿಯಿಂದ ಬಡ ವ್ಯಾಪಾರಿಗಳಿಗೆ ಹಣ ಸಹಾಯ ಮಾಡುವ ಹೋಸ ವಿಶೇಷ ಯೋಜನೆ ರುಪಿಸುವ ಮೂಲಕ ಅವರ ನೇರವಿಗೆ ಮುಂದಾಗಬೇಕೆಂದು ಬಾಲರಾಜ್ ಗುತ್ತೇದಾರ ಒತ್ತಾಯಿಸಿದಾರೆ.