ಕಲಬುರಗಿ: ತೋಳಗಳ ದಾಳಿ : 15ಕ್ಕೂ ಹೆಚ್ಚು ಕುರಿಗಳ ಸಾವು

0
71

ಕಲಬುರಗಿ: ತೋಳಗಳ ದಾಳಿಗೆ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಶಹಾಬಾದ ತಾಲೂಕಿನ ತರನಳ್ಳಿ ಗ್ರಾಮದ ಹತ್ತಿರ ನಡೆದಿದೆ.

ಸುರಪೂರ ತಾಲೂಕಿನ ಅಮ್ಮಾಪೂರದ ವೆಂಕಪ್ಪ ಬೆನಕನಹಳ್ಳಿ ಅವರಿಗೆ ಸೇರಿದ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ. ಕುರಿಗಳ ಹಿಂಡುಗಳನ್ನು ಊರಿನಿಂದ ಊರಿಗೆ ಹೋಗುವ ಇವರು ತರನಳ್ಳಿ ಗ್ರಾಮದ ಹತ್ತಿರ ನೆಲೆಸಿಕೊಂಡಿದ್ದರು.ರಾತ್ರಿ ಮಳೆ ಬರುವ ಸಮಯದಲ್ಲಿ ತೋಳಗಳು ಏಕಾಏಕಿ ಕುರಿಗಳ ದಾಳಿ ಮಾಡಿವೆ.

Contact Your\'s Advertisement; 9902492681

ಏಕಾಏಕಿ ತೋಳಗಳು ದಾಳಿ ನಡೆಸಿದ್ದು, 15 ಕ್ಕೂ ಹೆಚ್ಚು ಕುರಿ ಹಾಗೂ ಮರಿಗಳು ಸಾವನ್ನಪ್ಪಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಆರ್ಥಿಕ ನಷ್ಟ ಅನುಭವಿಸಿದ ಕುರಿ ಮಾಲಿಕ ವೆಂಕಪ್ಪ ಬೆನಕನಹಳ್ಳಿ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಪೊಲೀಸರಿಗೆ ತಿಳಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here