ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಜಿಲ್ಲಾ ಕಾನೂನು ಘಟಕ ಮತ್ತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅವರ ಸಯುಂಕ್ತಾಶ್ರಯದಲ್ಲಿ ಹೋರಾಟಗಾರರಿಗೆ ಮತ್ತು ಅವರ ಕುಟುಂಬದವರಿಗೆ ಕೋವಿಡ್ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಪಾಳಾದ ಷ.ಬ್ರ.ಡಾ ಶ್ರೀ ಗುರುಮೂರ್ತಿ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ್, ಶ್ರೀನಿವಾಸ ಸರಡಗಿಯ ಶಕ್ತಿಪೀಠದ ಪೀಠಾಧಿಪತಿ ಪರಮಪೂಜ್ಯ ಡಾ. ಅಪ್ಪಾರಾವ ದೇವಿ ಮುತ್ಯಾ, ಲಿಂಗರಾಜ ಅಪ್ಪಾ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಬಿ ಗದ್ದುಗೆ, ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಸಂಪತ ಜೆ ಹಿರೇಮಠ್, ಡಾ. ವೀಣಾ ಕೆ, ಸಮುದಾಯದ ಆರೋಗ್ಯ ಅಧಿಕಾರಿ ಸುಜಾತ ಎಂ, ಮಾಲಾ ದಣ್ಣೂರ್, ಮಾಲಾ ಕಣ್ಣಿ, ಉದಯ ಮಾಕ್ಕಾ, ಭುವನೇಶ್ವರಿ ಹಳ್ಳಿಖೇಡ ಇದ್ದರು.