ಆಳಂದ: ಪಟ್ಟಣದ ಪ್ರತಿಷ್ಠಿತ ಎಸ್ಆರ್ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಕೋವಿಡ್ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಲಸಿಕಾ ಅಭಿಯಾನಕ್ಕೆ ಸ್ಥಳೀಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೃಥ್ವಿರಾಜ ರಾಠೋಡ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಯಿತು.
ಲಸಿಕಾ ಅಭಿಯಾನದಲ್ಲಿ ಕಾಲೇಜಿನ ಪ್ರಾಚಾರ್ಯೆ ಕಲ್ಯಾಣಿ ಸಾವಳಗಿ, ಸಿಬ್ಬಂದಿಗಳಾದ ರಾಜಕುಮಾರ ಬಡಿಗೇರ, ಮಹೇಶ ಮಾಡ್ಯಾಳೆ, ಖಂಡಪ್ಪ ವಗ್ಗೆ, ಸಂತೋಷ ಸಲಗರೆ, ಕಲ್ಯಾಣಿ ಪೂಜಾರಿ, ಸಿದ್ಧಲಿಂಗ ಸಕ್ಕರಗಿ, ಮಲ್ಲಿಕಾರ್ಜುನ ಪೂಜಾರಿ, ಗುರುಲಿಂಗಯ್ಯ ಸ್ವಾಮಿ, ಕರಬಸಪ್ಪ ಖಜೂರಿ ಸೇರಿದಂತೆ ಇತರರು ಇದ್ದರು.