ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನಕ್ಕೆ ಆಗ್ರಹ

0
17

ಕಲಬುರಗಿ: ರಾಜ್ಯದಲ್ಲಿ ಅಲೆಮಾರಿ ಸಮುದಾಯಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಅಲೆಮಾರಿ/ಅರೆ-ಅಲೆಮಾರಿ ಜನಾಂಗಕ್ಕೆ ಉತ್ತಮವಾದ ಶಿಕ್ಷಣ ಹಾಗೂ ಶಾಶ್ವತವಾಗಿ ನೆಲೆಸಲು ವಸತಿ ಯೋಜನೆಯ ಅಗತ್ಯವಿದೆ. ಹೀಗಾಗಿ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಯಲ್ಲಿ ವಿಶೇಷ ಮೀಸಲಾತಿ, ವಿವಿಧ ವಸತಿ ಯೋಜನೆಯಡಿ ಶಾಶ್ವತ ಸೂರು ಕಲ್ಪಿಸುವುದು ಅವಶ್ಯಕವಾಗಿದೆ. ಈ ಸಮುದಾಯಗಳ ಶೈಕ್ಷಣಿಕ ಪ್ರಗತಿ ಮತ್ತು ಉತ್ತೇಜನಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತ್ಯೇಕ ವಸತಿ ನಿಲಯ ಹಾಗೂ ಉದ್ಯೋಗಧಾರಿತ ತರಬೇತಿ ಕೇಂದ್ರ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರದಿಂದ ಅಲೆಮಾರಿ/ಅರೆ-ಅಲೆಮಾರಿ ಸಮುದಾಯಕ್ಕೆ ಸೇರಿದ ಭೂ ರಹಿತ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು ಭೂ ಖರೀದಿ ಯೋಜನೆ ಬಹಳ ಉಪಕಾರಿಯಾಗಿದೆ. ಆದ್ದರಿಂದ ಶಾಶ್ವತ ಆಸ್ತಿಯಾಗಿ ಸೃಜನೆಯಾಗುವ ಭೂ ಖರೀದಿ (ಭೂ ಒಡೆತನ) ಯೋಜನೆ ಮುಂದುವರೆಸಬೇಕು. ಇದಕ್ಕಾಗಿಯೇ ವಿಶೇಷ ಅನುದಾನ ಮಿಸಲಿಡಬೇಕು. ಈ ಯೋಜನೆಯಡಿ ಭೂಮಿ ನೀಡಿದರೆ ಬೇರೆಯವರಿಗೆ ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಇಂತಹ ಯೋಜನೆಗಳಿಂದ ಅಲೆಮಾರಿಗಳು‌  ಒಂದೇ ಕಡೆ ನೆಲೆಸಿ ಸರಳ ಜೀವನ ಸಾಗಿಸಲು ಬಹಳ ಅನುಕೂಲವಾಗುತ್ತದೆ.

Contact Your\'s Advertisement; 9902492681

ಅಲೆಮಾರಿ/ಅರೆ-ಅಲೆಮಾರಿ ಬುಡಕಟ್ಟು ಜನಾಂಗದಲ್ಲಿ ಬರುವ 46 ಜಾತಿ ಜನಾಂಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‍ನಲ್ಲಿ ಸರಕಾರ ಇನ್ನು ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here