ಗುತ್ತೇದಾರ ಕಾಲೇಜ್ ವಿದ್ಯಾರ್ಥಿನಿ ತಾಲೂಕಿಗೆ ಟಾಪರ್

0
5

ಆಳಂದ: ಪಟ್ಟಣದ ಪ್ರತಿಷ್ಠಿತ ಜೀವನಜ್ಯೋತಿ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಮಾತೋಶ್ರೀ ಅಂಬವ್ವಾ ರುಕ್ಮಯ್ಯ ಗುತ್ತೇದಾರ ಸ್ವತಂತ್ರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿನಿ ಕಲ್ಪನಾ ಶ್ರೀಮಂತ ಚನ್ನಗೊಂಡ ಶೇ. ೯೯.೧೬ ಅಂಕ ಪಡೆಯುವುದರೊಂದಿಗೆ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.

ಕಾಲೇಜಿಗೆ ಶೇ. ೧೦೦% ರಷ್ಟು ಫಲಿತಾಂಶ ಲಭ್ಯವಾಗಿದೆ. ಈ ಬಾರಿಯ ಫಲಿತಾಂಶವು ಎಸ್‌ಎಸ್‌ಎಲ್‌ಸಿ. ಪ್ರಥಮ ಪಿಯು ಅಂಕಗಳು ಹಾಗೂ ಕೋವಿಡ್ ೧೦ % ಅಂಕಗಳೊಂದಿಗೆ ಪ್ರಕಟಗೊಂಡಿದೆ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದ್ದಾರೆ.

Contact Your\'s Advertisement; 9902492681

ವಿದ್ಯಾರ್ಥಿನಿಯ ಸಾಧನೆಗೆ ಶಾಸಕರೂ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಸುಭಾಷ್ ಆರ್ ಗುತ್ತೇದಾರ, ಸಂಸ್ಥೆಯ ಕಾರ್ಯದರ್ಶಿಗಳಾದ ಹರ್ಷಾನಂದ ಗುತ್ತೇದಾರ, ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ. ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಸೇರಿದಂತೆ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಬಾಕ್ಸ್: ಬಹಳ ಸಂತೋಷವಾಗುತ್ತಿದೆ ಪರೀಕ್ಷೆ ಜರುಗಿದರೂ ಇಷ್ಟು ಅಂಕ ಪಡೆಯುತ್ತೆನೆಂಬ ಭರವಸೆಯಿತ್ತು. ನನ್ನ ಈ ಸಾಧನೆಯಲ್ಲಿ ಶಿಕ್ಷಣ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ. ನಾನು ಒಂದನೇ ತರಗತಿಯಿಂದ ಪಿಯುವರೆಗೂ ಇಲ್ಲೇ ಓದಿದ್ದೇನೆ. ಶಿಕ್ಷಕರ, ಉಪನ್ಯಾಸಕರ, ಸಂಸ್ಥೆಯವರ ಸಹಕಾರ ಮರೆಯಲಾಗದು. ಮುಂದೆ ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಕ್ಷೇತ್ರಕ್ಕೆ ಹೋಗಬೇಕೆಂಬ ಆಸೆಯಿದೆ.- ಕಲ್ಪನಾ ಶ್ರೀಮಂತ ಚೆನ್ನಗೊಂಡ, ವಿದ್ಯಾರ್ಥಿನಿ.

ಬಾಕ್ಸ್: ವಿದ್ಯಾರ್ಥಿನಿಗೆ ಅಭಿನಂದನೆಗಳು. ಮುಂದೆ ಅವಳು ಯಾವ ಕ್ಷೇತ್ರದಲ್ಲಿ ಮುಂದುವರೆದರೂ ಸಂಸ್ಥೆ ವಿದ್ಯಾರ್ಥಿನಿಯ ಜೊತೆಗಿರುತ್ತದೆ. ಉಪನ್ಯಾಸಕ ವೃಂದಕ್ಕೂ ಅಭಿನಂದನೆಗಳು- ಸುಭಾಷ್ ಆರ್ ಗುತ್ತೇದಾರ, ಶಾಸಕರು ಹಾಗೂ ಸಂಸ್ಥೆಯ ಅಧ್ಯಕ್ಷರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here