ಕಲಬುರಗಿ: ಸಮರ ಸಿಂಹ ಟಿ.ಎ.ನಾರಾಯಣ ಗೌಡರ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲೆಯ ವಾರ್ಡ ನಂ.೪೮ರ ಅಧ್ಯಕ್ಷ ಸುರೇಶ ಜಿ ಹೊಸಮನಿ ನೆತೃತ್ವದಲ್ಲಿ ಕಲಬುರಗಿ ಜಿಲ್ಲೆಯ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ ನಗರದ ಗುಲಬವಾಡಿಯ ಬಡವಾಣೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಮತ್ತು ಗರ್ಭೀಣ ಸ್ತ್ರೀಯರಿಗೆ ಪೌಷ್ಟಿಕ ಆಹಾರವಾದ ಹಾಲು, ಮೊಟ್ಟೆ, ಹಾಗು ಇನ್ನಿತರ ಯಾವುದೆ ಸಾಮಗ್ರಿಗಳನ್ನು ದೊರೆತಿರುವುದಿಲ್ಲ. ಆದ್ದರಿಂದ ತಾವುಗಳು ಈ ವಿಷಯವನ್ನು ಕುಲಂಕುಷವಾಗಿ ಪರಿಶೀಲಿಸಿ ಇದರಲ್ಲಿ ಅಂಗನವಾಡಿಯ ಕಾರ್ಯಕರ್ತೆಯರು ಪೌಷ್ಟಿಕ ಆಹಾರ ನಿಡುತ್ತಿಲ್ಲವೋ ಅಥವಾ ಸರಕಾರದಿಂದ ಸರಬರಾಜು ಆಗೊತ್ತಿಲ್ಲವೊ ಎಂಬುದನ್ನು ವಿಚಾರಣೆ ನಡೆಸಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರದ ತಾಲೂಕು ಅಧ್ಯಕ್ಷ ಪುನಿತರಾಜ ಸಿ ಕವಡೆ, ಗುಲಬವಾಡಿಯ ಅಧ್ಯಕ್ಷ ಸುರೇಶ ಜಿ ಹೊಸಮನಿ, ನಿಸಾರ ಅಹ್ಮದ ಖಾನ ಆಕಾಶ ಎಮ್,ಹಾಗು ಶಾಂತಮ್ಮ, ವಂದನ,ನಾಗಮ್ಮ,ಗುರುಬಾಯಿ ಹಾಗೂ ಕಾರ್ಯಕರ್ತರು ಇದ್ದರು.