ಶಾಸಕ ಗುತ್ತೇದಾರರವರಿಗೆ ಸಚಿವ ಸ್ಥಾನಕ್ಕೆ ಅಗ್ರಹ

0
705

ಆಳಂದ: ಸ್ಥಳೀಯ ಶಾಸಕರೂ ಆಗಿರುವ ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡರಾದ ಶುಭಾಶ ಆರ್ ಗುತ್ತೇದಾರ ಅವರಿಗೆ ಬರುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಸುನೀತಾ ಚಂದ್ರಶೇಖರ ಪೂಜಾರಿ ಅಗ್ರಹಸಿದ್ದಾರೆ.

ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಗ್ರಾಂ. ಪಂಚಾಯತ್ ಸಾವಳೇಶ್ವರ ಸುನೀತಾ ಚಂದ್ರಶೇಖರ ಪೂಜಾರಿ ಅವರು ಇಂದಿಲ್ಲಿ ಸುದ್ದಿಗೊಷ್ಟಿಯಲ್ಲಿ ಮಾತನಾಡಿ ಈ ಹಿಂದೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆಳಂದ ವಿಧಾನ ಸಭಾ ಮತ ಕ್ಷೇತ್ರಕ್ಕೆ ಪಕ್ಷದ ಚುನಾವಣಾ ಪ್ರಚಾರಕ್ಕೆ ಬಂದಾಗ ಶಾಸಕ ಶುಭಾಶ ಆರ್ ಗುತ್ತೇದಾರ ಅವರನ್ನು ಮಂತ್ರಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು.

Contact Your\'s Advertisement; 9902492681

ಭರವಸೆಯಂತೆ ಹಾಗೂ ಕ್ಷೆತ್ರದ ಜನರ ಒತ್ತಾಸೆಯಂತೆ ಗುತ್ತೇದಾರರಿಗೆ ಸಚಿವ ಸ್ಥಾನ ನೀಡಬೇಕು. ಶಾಸಕರು ಈ ಭಾಗದ ಬಿ ಜೆ ಪಿ ಗೆ ಶಕ್ತಿ ತುಂಬಲು ಹಗಲಿರುಳು ಶ್ರೇಮಿಸುತ್ತಿದ್ದಾರೆ. ಮತ ಕ್ಷೇತ್ರದಲ್ಲಿ ಇದುವರಿಗೂ ಯಾರು ಮಂತ್ರಿಗಳು ಆಗಿಲ್ಲ ಅಂತ ಅವಕಾಶ ಈಗ ಒದಗಿ ಬಂದಿದೆ ನಾಲ್ಕು ಭಾರಿ ಶಾಸಕರಾಗಿರುವ ಶಾಸಕ ಗುತ್ತೇದಾರ ಅವರು ಸಚಿವರಾಗಲು ಎಲ್ಲಾ ಅರ್ಹತೆ ಹೊಂದಿದ್ದಾರೆ. ಅನುಭವಿ ರಾಜಕಾರಣಿಯನ್ನು ಮಂತ್ರಿ ಮಾಡುವಂತೆ ರಾಜ್ಯ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರಿಗೆ ಮನವಿ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here