ಎಎಸ್‌ಐ ಆಗಿ ಪದೋನ್ನತಿ ಹೊಂದಿದ ಗೋಪಾಲ ರಾಠೋಡಗೆ ಸನ್ಮಾನ

0
17

ಸುರಪುರ: ಇಲ್ಲಿಯ ಪೊಲೀಸ್ ಠಾಣೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಪೊಲೀಸ್ ಪೇದೆಯಾಗಿ ಸೇವೆ ಸಲ್ಲಿಸಿ ಈಗ ಎಎಸ್‌ಐ ಆಗಿ ಪದೋನ್ನತಿ ಹೊಂದಿ ಕೆಂಭಾವಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಎಎಸ್‌ಐ ಗೋಪಾಲ ರಾಠೋಡಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ.ಸಾಗರ ಬಣದ ಮುಖಂಡರು ಸನ್ಮಾನಿಸಿ ಗೌರವಿಸುವ ಮೂಲಕ ಕರ್ತವ್ಯಕ್ಕೆ ಶುಭ ಕೋರಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಪಾಲ ರಾಠೋಡ ಅವರು,ಇದುವರೆಗು ಸುರಪುರ ಠಾಣೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ.ನನ್ನ ಇದುವರೆಗಿನ ಸೇವೆಗೆ ಅವಕಾಶ ನೀಡಿದ ಡಿವೈಎಸ್ಪಿಯವರಿಗೆ ಮತ್ತು ಪಿಐ ಹಾಗು ಎಲ್ಲಾ ಪಿಎಸ್‌ಐ ಅವರುಗಳಿಗು ಹಾಗು ತಮ್ಮೆಲ್ಲರಿಗು ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಮಾನಪ್ಪ ಶೆಳ್ಳಗಿ,ಮರಿಲಿಂಗ ಗುಡಿಮನಿ ಹುಣಸಿಹೊಳೆ,ಶೇಖರ ಮಂಗಳೂರು,ಶರಣಬಸವ ಮಂಗಳೂರು,ಭೀಮರಾಯ ಮಂಗಳೂರ,ಶಿವಪ್ಪ ಶೆಳ್ಳಗಿ,ಹಸನಪ್ಪ ದೇವಾಪುರ,ವೆಂಕಟೇಶ ದೇವಾಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here