ಡಾ.ಜಿ. ಪರಮೇಶ್ವರಗೆ ಮುಂದಿನ ದಿನಗಳಲ್ಲಿ ಅಧಿಕಾರದ ಭಾಗ್ಯ ಸಿಗಲಿ: ಪಾಟೀಲ

0
15

ಕಲಬುರಗಿ: ನಗರದ ನೀರಾಶ್ರಿತರ ಪರಿಹಾರ ಕೇಂದ್ರದಲ್ಲಿ ಅಖಿಲ ಕರ್ನಾಟಕ ಡಾ.ಜಿ. ಪರಮೇಶ್ವರ ಯುವ ಸೈನ್ಯ ವತಿಯಿಂದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ ರವರ ೭೦ನೇ ಜನ್ಮದಿನದ ಪ್ರಯುಕ್ತ ನಿರಾಶ್ರಿತರಿಗೆ ಹಣ್ಣು ಹಂಪಲು, ಬ್ರೇಡ್, ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡಾ.ಜಿ. ಪರಮೇಶ್ವರ್ ರವರು ಒಬ್ಬ ಮಹಾನ್ ನಾಯಕ, ದೀನ, ದಲಿತರ ಆಶಾಕಿರಣ, ಮುಂದಿನ ದಿನಗಳಲ್ಲಿ ಅವರಿಗೆ ಅಧಿಕಾರದ ಭಾಗ್ಯ ಸಿಗಲಿ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಾ. ಜಿ. ಪರಮೇಶ್ವರ ಯುವ ಸೈನ್ಯದ ಜಿಲ್ಲಾಧ್ಯಕ್ಷ ಶ್ರೀಧರ್ ಇಂಗನಕಲ್, ಉಪ್ಪಾಧ್ಯಕ್ಷ ಸೈದಪ್ಪ ಡಾಂಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಜಂಬಗಿ, ಕಾಂಗ್ರೆಸ್ ಮುಖಂಡ ಅರುಣ್ ಭರಣಿ, ಕಿರಣ, ಶಿವಾನಂದ, ಕಿರಣ ನಿಂಬರ್ಗಾ, ಅಂಬರೀಷ ನಿಂಬರ್ಗಾ, ಮಡಿವಾಳ, ಷಣ್ಮುಖ ಜಂಬಗಿ, ರಾಜು, ಗೌತಮ ಕಡಗಂಚಿ, ಮಲ್ಲು ಭೈರಾಮಡಗಿ, ಶರಣು ಸುತಾರ್, ವೀರೇಶ್ ಹಾಗೂ ಯುವ ಸೈನ್ಯಯ ಪದಾದಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here