ಕೆನರಾ ಬ್ಯಾಂಕ್ ಗ್ರಾಹಕರ ಸಭೆ: ಮಹಾ ಪ್ರಭಂಧಕರಾದ ರವಿಸುಧಾಕರ ಚಾಲನೆ

0
85

ಕಲಬುರಗಿ: ಬೀದರ್ ಜಿಲ್ಲೆಯ ಕೆನರಾ ಬ್ಯಾಂಕಿನ ಗಣ್ಯರು, ಅತೀ ಗಣ್ಯ ಗ್ರಾಹಕರು ಪಾಲ್ಗೊಂಡಿದ್ದರು. ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯ ಹುಬ್ಬಳ್ಳಿಯ ಮಹಾ ಪ್ರಭಂಧಕರಾದ ರವಿಸುಧಾಕರ ರವರು ಉಪಸ್ಥಿತರಿದ್ದು ಬ್ಯಾಂಕ್ ಗ್ರಾಹಕರಿಗೆ ಬ್ಯಾಂಕಿನ ಕೊಡುಗೆಗಳ ಬಗ್ಗೆ ತಿಳಿಸಿದರು.

ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಿಕೊಡುವ ನಿಟ್ಟಿನಲ್ಲಿ ಕೈಗೊಂಡ ಇಂಟರ್ನೆಟ್, ಮೋಬೈಲ್ ಬ್ಯಾಂಕ್ ತ್ವರಿತ ಗತಿಯ ಸೇವೆಗಳ ಆಧುನೀಕರಣದ ಬಗೆಗೆ ವಿವರಿಸಿದರು. ಎಲ್ಲಾ ಸಾಲ ಸೌಲಭ್ಯ ಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

Contact Your\'s Advertisement; 9902492681

ಗ್ರಾಹಕರ ಜೊತೆ ಚರ್ಚೆಯಲ್ಲಿ ಭಾಗವಹಿಸಿ ಅವರ ಪ್ರಶ್ನೆ ಸಂದೇಹಗಳಿಗೆ ಪರಿಹಾರ ನೀಡಿದರು.

ಕ್ರೆಡಾಯ್ ಚೇರ್ಮನ್ ಸಂಜೋಗ್ ರಾಠಿ, ಎಚ್ ಕೆ ಈ ಪ್ರೆಸಿಡೆಂಟ್ ಭೀಮಾಶಂಕರ ಬಿಳಗುಂದಿ. ಗೋಲ್ಡ್ ಮರ್ಚೆಂಟ್ಸ ಅಸೋಸಿಯೇಷನ್ ಪ್ರೆಸಿಡೆಂಟ್ ಮೈಲಾಪೂರ, ಗಿಲ್ಡಾಗ್ರುಫ್, ಗೀತಾ ಗ್ರುಪ್ ಆಫ್ ಕಂಪನಿ, ಹಲವಾರು ಗಣ್ಯರು ಉಪಸ್ಥಿತರಿದ್ದರು ಮತ್ತೂ ಗ್ರಾಹಕರ ಮೀಟ್ ಆಂಡ್ ಗ್ರೀಟ್, ಭೇಟಿ ಮತ್ತು ಶುಭ ಕೋರುವ ಮೂಲಕ ಫಲಪ್ರದ ಚರ್ಚೆ ನಡೆಯಿತು.

ಸಂಜೀವಪ್ಪ ಸಹಾಯಕ ಮಹಾ ಪ್ರಭಂಧಕರು ಸ್ವಾಗತಿಸಿದರು, ನಳಿನಿ ವಿಭಾಗೀಯ ಪ್ರಭಂಧಕರು ವಂದಿಸಿದರು. ರವಿಕುಮಾರ ಕಾರ್ಯಕ್ರಮ ನಿರೂಪಿಸಿದರು. ಸ್ಥಳೀಯ ಮತ್ತು ಸುತ್ತಮುತ್ತಲಿನ ಎಲ್ಲಾ ಶಾಖಾ ಪ್ರಭಂಧಕರು ಮತ್ತು ಗ್ರಾಹಕರು ಗಳು ಸಕ್ರೀಯವಾಗಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here