ಸುರಪುರ: ಚುನಾವಣೆಯ ಪೂರ್ವದಲ್ಲಿ ರಾಜಕಾರಣ ಏನೇ ಮಾಡಿದರು ಚುನಾವಣೆ ಮುಗಿದು ಶಾಸಕನಾದ ಮೇಲೆ ನೀವೆಲ್ಲರು ನಮ್ಮ ಕುಟುಂಬದ ಸದಸ್ಯರಿದ್ದಂತೆ.ಆದ್ದರಿಂದ ಈಗ ನಿಮ್ಮೆಲ್ಲರ ಸೇವೆಗೆ ಬಂದಿರುವೆ ಈ ಸ್ಥಳ ನಿಮ್ಮದಾಗಿಸುವುದು ನನ್ನ ಜವಬ್ದಾರಿಯಾಗಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ನಗರದ ರಂಗಂಪೇಟೆಯ ಬಡಾ ಬಜಾರದಲ್ಲಿನ ಸರ್ವೇ ನಂಬರ್ ೭೩/೧ ಹಾಗು ೭೩/೨ರ ಗೈರಾಣಿ ಜಾಗ ಸರಕಾರದ್ದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರಿಂದಾಗಿ ಪ್ರಾದೇಶಿಕ ಆಯುಕ್ತರ ಆದೇಶದ ಮೇರೆಗೆ ಕಳೆದ ಕೆಲ ದಿನಗಳ ಹಿಂದೆ ಕಂದಾಯ ಇಲಾಖೆಯ ಮತ್ತು ನಗರಸಭೆ ಅಧಿಕಾರಿಗಳು ಈ ಸ್ಥಳದ ಸರ್ವೇ ಮಾಡಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಸೋಮವಾರ ಬೆಳಿಗ್ಗೆ ಶಾಸಕ ರಾಜುಗೌಡ ರಂಗಂಪೇಟೆಯ ಬಡಾ ಬಜಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸೇರಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ,ತಾವೆಲ್ಲರು ನೂರಾರು ವರ್ಷಗಳಿಂದ ಇದೇ ಜಾಗದಲ್ಲಿರುವಿರಿ,ಆದರೆ ಈಗ ಸಾಮಾಜಿಕ ಕಾರ್ಯಕರ್ತರೊಬ್ಬರು ಸಲ್ಲಿಸಿದ ಮನವಿಯ ಮೇರೆಗೆ ಸ್ಥಳದ ಸರ್ವೇ ಮಾಡಲಾಗಿದೆ,ಆದರೆ ಇದರ ಬಗ್ಗೆ ತಾವ್ಯಾರು ಚಿಂತಿಸಬೇಕಿಲ್ಲ,ಇಂದಿನಿಂದ ನೀವೆಲ್ಲರು ಆರಾಮವಾಗಿರಿ ಇದರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮತ್ತು ಕಂದಾಯ ಸಚಿವರಾದ ಆರ್.ಅಶೋಕ ಅವರಿಗೆ ಖುದ್ದಾಗಿ ಭೇಟಿ ಮಾಡಿ ಈ ಜಾಗದಲ್ಲಿ ತಾವೆಲ್ಲರು ನೂರಾರು ವರ್ಷಗಳಿಂದ ವಾಸಿಸುತ್ತಿರುವ ಕುರಿತು ಫೋಟೊ ಸಮೇತ ಅವರಿಗೆ ಮನವರಿಕೆ ಮಾಡಿ ಈ ಜಾಗವನ್ನು ನಿಮ್ಮದಾಗಿಸಿ ಕೊಡುವ ಜವಬ್ದಾರಿ ನನ್ನದೆಂದು ಭರವಸೆ ಮೂಡಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ದೊಡ್ಡದೇಸಾಯಿ ದೇವರಗೋನಾಲ,ಭಿಮಣ್ಣ ಬೇವಿನಾಳ ಹಾಗು ಸ್ಥಳಿಯ ಮುಖಂಡರಾದ ಖಾಲಿದ್ ಅಹ್ಮದ್ ತಾಳಿಕೋಟೆ,ಶೇಖ್ ಮಹಿಬೂಬ ಒಂಟಿ,ನಗರಸಭೆ ಸದಸ್ಯ ಮಹ್ಮದ್ ಗೌಸ್ ಕಿಣ್ಣಿ ಸೇರಿದಂತೆ ಅನೇಕ ಜನರು ಭಾಗವಹಿಸಿದ್ದರು.