ಯುವ ನ್ಯಾಯವಾದಿಗಳ ಹಿತರಕ್ಷಣಾ ಸಮಿತಿಯಿಂದ ಪಾಲಿಕೆ ಆಯುಕ್ತರಿಗೆ ಸನ್ಮಾನ

0
66

ಕಲಬುರಗಿ: “ಅಂತರರಾಷ್ಟ್ರೀಯ ಯುವ ದಿನ” ದ ನಿಮಿತ್ತ ಇಂದು ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಯುವ ಆಯುಕ್ತರಾದ ಲೋಖಂಡೇ ಸ್ನೇಹಲ ಸುಧಾಕರ ರವರನ್ನು ಕಲ್ಯಾಣ ಕರ್ನಾಟಕ ಯುವ ನ್ಯಾಯವಾದಿಗಳ ಹಿತರಕ್ಷಣಾ ಹೋರಾಟ ಸಮಿತಿಯ ಪರವಾಗಿ ಶುಭಕೋರಿ ಗೌರವಿಸಲಾಯಿತು.

ಸಾರ್ವಜನಿಕ ಸಂಪರ್ಕ ಅಧಿಕಾರಿ ನಾಗರತ್ನ ದೇಶಮಾನೆ ಸ್ವಾಗತಿಸಿದರು. ನಂತರ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ವಕೀಲರ ಹಿತರಕ್ಷಣಾ ವೇದಿಕೆಯ ಸಂಚಾಲಕ ರಮೇಶ. ಸಿ. ದೊಡ್ಡಮನಿ ಯುವ ದಿನದ ಪ್ರಯುಕ್ತರಿಗೆ ಗೌರವಿಸಿ ಶುಭ ಕೋರಿದರು.

Contact Your\'s Advertisement; 9902492681

ನಗರದ ಪ್ರತಿಷ್ಠಿತ ಜಗತ್ ಪಕ್ಷಿಮ ಭಾಗದಲ್ಲಿ ನೆನೆಗುದಿಗೆ ಬಿದ್ದ ಭುದ್ದ ಆವರಣವನ್ನು ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಿ, ಕಾರ್ಯಗತಗೊಳಿಸಿದ್ದು ಅತೀವ ಸಂತೋಷ್ ಉಂಟು ಮಾಡಿದೆ. ಯುವ ಶಕ್ತಿ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದು ಸಾಬೀತಾಗಿದೆ ಎಂದು ತಿಳಿಸಿದರು.

ಕ.ಕ. ಯುವ ನ್ಯಾಯ ವಾದಿಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಜೇನವೆರಿ ವಿನೋದ ಕುಮಾರ್ ಆಯುಕ್ತರಿಗೆ ಗೌರವಿಸಿ ಮಾತನಾಡಿ ನಿಮ್ಮ ಆಡಳಿತದಲ್ಲಿ ಮುಂದಿನ ದಿನಗಳಲ್ಲಿ ಜರುಗುವ ಪಾಲಿಕೆ ಚುನಾವಣೆ ನೀತಿ ಅಡಿ ಸುಲಲಿತವಾಗಿ ನಡೆದು ಮಾದರಿ ಯುವ ನೇತಾರರು ನಗರದ ಸೇವೆ ಮಾಡಲು ಮುಖ್ಯ ವಾಹಿನಿಯಾಗುವಂತೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕಿ, ವಾಣಿ, ಯುವ ಕಾರ್ಯಕರ್ತ ರವಿ ಹರಗಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here