ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಯುವಕನಿಗೆ ಶಾಸಕ ಮತ್ತಿಮೂಡ್ ಭೇಟಿ

0
38

ಕಲಬುರಗಿ: ವಿದ್ಯುತ್ ಸ್ಪರ್ಶದಿಂದ ಕಮಲಾಪುರ ಗ್ರಾಮದ ಬಡ ಕುಟುಂಬದ ಹಾಗೂ ದಲಿತ ವರ್ಗದ ಅಶ್ವಿಕುಮಾರ ಎರಡು ಕೈಗಳನ್ನು ಕಳೆದುಕೊಂಡು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ್ ಅವರು ಅಶ್ವಿನ್ ಅವರ ಕುಟುಂಬಕ್ಕೆ ನೆರವಾಗುವಂತೆ ವೈಯಕ್ಕಿಕವಾಗಿ ಒಂದು ಲಕ್ಷ ರೂ. ಸಹಾಯಧನ ವಿತರಿಸಿ ಆರೋಗ್ಯದ ಬಗ್ಗೆ ವಿಚಾರಿಸಿದರು.

ಅಶ್ವಿನ್ ತನ್ನ ಜೀವನೋಪಾಯಕ್ಕಾಗಿ ದುಡಿದು ತಿನ್ನುವ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಅವರು ತನ್ನ ತಂದೆ, ತಾಯಿಯನ್ನು ಸಹ ಕಳೆದುಕೊಂಡಿದ್ದಾರೆ.

Contact Your\'s Advertisement; 9902492681

ಆತನ ಜೀವನ ದುಸ್ಥಿತಿಯಲ್ಲಿದೆ. ಈಗಾಗಲೇ ನಾನು ಕೈಲಾದಷ್ಟು ಸಹಾಯವನ್ನು ಮಾಡಿರುವೆ. ಮುಖ್ಯ ಮಂತ್ರಿಗಳ ಪರಿಹಾರ ನಿಧಿ, ಇಲ್ಲವೇ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುತ್ತೇನೆ. ಎಂದು ಮತ್ತಿಮೂಡ್ ಕುಟುಂಬಕ್ಕೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿಶ್ವನಾಥ ಪಾಟೀಲ, ಶಿವುಕುಮಾರ ದೋಶೆಟ್ಟ, ನಾಗರಾಜ ಹುಂಚಿಗಿಡ, ಸಿದ್ದು ಗೋಣಿ, ನಿತೀನ ವಾಲಿಕಾರ, ಶಂಭು ತುಕ್ಕೋಜಿ, ಗೋರಖನಾಥ ಶಾಖಾಪುರೆ, ಹನುಮಂತ ಬಿರಾದಾರ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here