ಕಲಬುರಗಿ: ವಾರ್ಡ್ 25 ಕ್ಕೆ ಕಾಂಗ್ರೆಸ್ ಹುರಿಯಾಳಾಗಿ ರತೀಶ ಭೂಸನೂರ್ ನಾಮಪತ್ರ ಸಲ್ಲಿಕೆ

0
16

ಕಲಬುರಗಿ: ಕಲಬುರಗಿ ಮಹಾ ನಗರ ಪಾಲಿಕೆಯ ವಾರ್ಡ್ 25 ರಲ್ಲಿ ಕಾಂಗ್ರೆಸ್ ಉಮೇದುವಾರರಾಗಿ ರತೀಶಕುಮಾರ್ ಬಸವರಾಜ ಭೂಸನೂರ್ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಷಹಾಬಜಾರ್, ಕೈಲಾಸ ನಗರ ಸೇರಿದಂತೆ ಹಲವು ಬಡಾವಣೆಗಳ ವ್ಯಾಪ್ತಿಯ ಈ ವಾರ್ಡ್‍ನಲ್ಲಿ ಕಣಕ್ಕಿಳಿದಿರುವ ರತೀಶ ಭೂಸನೂರ್ ಮತದಾರರು ತಮಗೆ ಆಶಿರ್ವಾದ ಮಾಡಿದಲ್ಲಿ ಈ ವಾರ್ಡ್‍ನ ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇಲ್ಲಿ ಕಾಡುತ್ತಿರುವ ಮೂಲ ಸೌಕರ್ಯ ಕೊರತೆಗಳನ್ನು ನೀಗಿಸುವ ದಿಶೆಯಲ್ಲಿ ತಾವು ಪ್ರಾಮಾಣಿಕವಾಗಿ ಪ್ರಯತ್ನಿಸೋದಾಗಿ ಹೇಳಿದ್ದಾರೆ.

Contact Your\'s Advertisement; 9902492681

ಕಲಬುರಗಿ ಬೀದರ್ ಹಾಲು ಒಕ್ಕೂಟದ ಅಧ್ಯಕ್ಷ ಆರ್ ಕೆ ಪಾಟೀಲ್, ಮಾಜಿ ಎಂಎಲ್‍ಸಿ ತಿಪ್ಪಣ್ಣಪ್ಪ ಕಮಕನೂರ್, ಹಾಪಕಾಮ್ಸ್ ಅಧ್ಯಕ್ಷ ಗುರುಶಾಂತ ಪಾಟೀಲ್, ಮಾಜಿ ಮೇಯರ್ ಸಂಜಯ್ ಸಿಂಗ್, ವೈಜುಗೌಡ ಪಡಸಾವಳಗಿ, ವೀರಶೈವ ಮಹಾಸಭೆಯ ಶರಣು (ಚಿನ್ನು) ಪಾಟೀಲ್, ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ, ಸಂದೇಶ ಕಮಕನೂರ್ ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here