ಚಿಂಚೋಳಿ: ಶೇಳ್ಳಾಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ, ಲೋಕಪಯೋಗಿ ಇಲಾಖೆ 2020-21ನೇ ಸಾಲಿನ ನಬರ್ಡ್ ಆರ್. ಡಿ.ಎಫ್-25 ಯೋಜನೆ ಅಡಿಯಲ್ಲಿ ಸರಕಾರಿ ಹಿರಿಯ ಪ್ರೌಢ ಶಾಲೆಗೆ 2ಹೆಚ್ಚುವರಿ ಕೋಣೆಗಳು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3 ಹೆಚ್ಚುವರಿ ಕೋಣೆಗಳ ನಿರ್ಮಾಣಗೊಂಡಿರುವ ಕಟ್ಟಡವನ್ನು ಶಾಸಕರಾದ ಡಾ. ಅವಿನಾಶ್ ಜಾಧವ ಅವರು ಉದ್ಘಾಟಿಸಿದರು.
ಶೇಳ್ಳಾಗಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಅಧ್ಯಕ್ಷರಾದ ರಾಜೇಶ್ವರಿ ತಿಪ್ಪಣ್ಣ ಭಜಂತ್ರಿ, ಮುಖ್ಯಗುರುಗಳಾದ ತೇಜಪ್ಪ ಸಜ್ಜನ್, ಬಿಜೆಪಿ ಪಕ್ಷದ ಚಿಂಚೋಳಿ ಮಂಡಲ ಓಬಿಸಿ ಮೋರ್ಚಾದ ಅಧ್ಯಕ್ಷರಾದ ಮಲ್ಲು ಮರಗುತ್ತಿ, ಮಾಡುವರಾವ್ ಕುಲಕರ್ಣಿ, ರಾಜಶೇಖರ್ ಪಾಟೀಲ್,ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.