ಶ್ರೀ ಜಗನ್ನಾಥ ದಾಸರ ಆರಾಧನೆ

0
4

ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಜಗನ್ನಾಥ ದಾಸರ ಆರಾಧನೆಯನ್ನು ಶ್ರೀ ಹರಿಕಥಾಮೃತ ಸಾರ ಪಾರಾಯಣ ಮಾಡುವ ಮೂಲಕ ಆಚರಿಸಲಾಯಿತು.

ಅರ್ಚಕರಾದ ಶ್ರೀ ಗುಂಡಾಚಾರ್ಯ ಜೋಶಿ ಅವರು ಮಾತನಾಡಿದ, ದಾಸಚತುಷ್ಟರಲ್ಲಿ ಶ್ರೀ ಜಗನ್ನಾಥ ದಾಸರು ನಾಲ್ಕನೆಯವರು. ಶ್ರೀ ವಿಜಯದಾಸರು ಹಾಗೂ ಶ್ರೀ ಗೋಪಾಲದಾಸರ ಶಿಷ್ಯರಾಗಿ ಅನೇಕ ಕೀರ್ತನೆಗಳನ್ನು ಹಾಗೂ ಸೂಳಧಿಗಳನ್ನು ಹಾಗೂ ಅನೇಕ ದಾಸರ ಪದಗನ್ನು ರಚಿಸಿದ ಮಹನುಭಾರು. ಹಾಗೂ ಸಕಲಪುರಾಣಗಳ ಸಾರವನ್ನು ೩೨ ಸಂದಿಯ ಶ್ರೀ ಹರಿಕಥಾಮೃತ ಸಾರದಲ್ಲಿ ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರ ಅನುಗ್ರಹ ಸಕಲ ಭಕ್ತರ ಮೇಲು ಆಗಲಿ ಎಂದು ಆಚಾರ್ಯರು ತಿಳಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶ್ರೀ ಜಯತೀರ್ಥ ಭಜನಾ ಮಂಡಳಿಯ ವತಿಯಿಂದ ಶ್ರೀ ಹರಿಕಥಾಮೃತಸಾರ ಪಾರಾಯಣ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here