ಗಾನಯೋಗಿ ಪಂ.ಪುಟ್ಟರಾಜ ಗವಾಯಿ 11 ನೇ ಪುಣ್ಯ ಸ್ಮರಣೋತ್ಸವ

0
61

ಆಳಂದ: ತಾಲ್ಲೂಕಿನ ಸುಂಟನೂರ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಸಂಗೀತ ಲೋಕದ ಸಂತರಾದ ಗದುಗಿನ ಗಾನಯೋಗಿ ಲಿಂಗೈಕ್ಯ ಪಂ.ಪುಟ್ಟರಾಜ ಗವಾಯಿಗಳವರ 11 ನೇ ವರ್ಷಗ ಪುಣ್ಯ ಸ್ಮರಣೋತ್ಸವ ನಡೆಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ದೈಹಿಕ ಶಿಕ್ಷಕರಾದ ಶ್ರೀ ಶಿವಾನಂದ ಹಿರೇಮಠ ವಹಿಸಿ ಮಾತನಾಡಿ ಪುಟ್ಟರಾಜ ಗವಾಯಿಗಳವರು ವಿಶ್ವದ ವಿಭೂತಿ ಪುರುಷರು ಸಂಗೀತ ಸಾಹಿತ್ಯ ಕಲೆಗಳನ್ನು ನೀಡಿದವರು ಅಲ್ಲದೆ ಅಂಧ ಅನಾಥರ ಬಾಳಿಗೆ ಬೆಳಕಾದವರು ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ನೇತೃತ್ವವನ್ನು ಪುಟ್ಟರಾಜ ಗವಾಯಿಗಳ ಶಿಷ್ಯರಾದ ನಾಡಿನ ಖ್ಯಾತ   ಪುರಾಣ ಪ್ರವಚನಕಾರರು  ಯುವ ಸಾಹಿತಿಗಳಾದ ಶ್ರೀ ಬಂಡಯ್ಯ ಸ್ವಾಮಿಗಳ ಸುಂಟನೂರ ವಹಿಸಿದ್ದರು ಹಾಗೂ  ಅಂಗನವಾಡಿ ಕಾರ್ಯಕರ್ತರಾದ ಶಾಖಾಂಬರಿ ಸ್ಥಾವರಮಠ ‘ ಭಾಗ್ಯಶ್ರೀ ಮಠಪತಿ ಆಶಾ ಕಾರ್ಯಕರ್ತರಾದ ಸಾವಿತ್ರಿ ನಂದಿಕಲ್ ‘ಜಾನಪದ ಗಾಯಕಿಯರಾದ ಮಲ್ಲಮ್ಮ ತೆಲ್ಲೂರು ಸಂಗೀತ ನೀಡಿದರು .

ಮಾಳಿಂಗರಾಯ ವೈಜಾಪುರ ‘ ಹಿರಿಯರಾದ ಪ್ರಭಾವತಿ ಖಣದಾಳ  ಹಾಗು ಸುಂಟನೂರ ಗ್ರಾಮದ ಇನ್ನೂ ಅನೇಕರು ಭಾಗವಹಿಸಿದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here