ನರೇಂದ್ರ ಮೋದಿ ಜನುಮ ದಿನಕ್ಕೆ ಯುವ ಮೋರ್ಚಾ ರಕ್ತದಾನ

0
6

ಸುರಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನುಮ ದಿನದ ಅಂಗವಾಗಿ ಸುರಪುರ ತಾಲೂಕು ಬಿಜೆಪಿ ಯುವ ಮೋರ್ಚಾದಿಂದ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಪ್ರಮಾಣ ಪತ್ರ ವಿತರಿಸಿದರು.ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ದೊಡ್ಡದೇಸಾಯಿ ದೇವರಗೋನಾಲ,ಬಲಭೀಮ ನಾಯಕ ಬೈರಿಮಡ್ಡಿ,ಶರಣು ನಾಯಕ ಬೈರಿಮಡ್ಡಿ,ಬಿಜೆಪಿ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಶ್ರವಣಕುಮಾರ ನಾಯಕ ಡೊಣ್ಣಿಗೇರಿ,ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಚಾನಕೋಟಿ ಕನ್ನಳ್ಳಿ,ಉಪಾಧ್ಯಕ್ಷ ರಾಮನಗೌಡ ಬೈಲಾಪುರ,ಶೇಖಣ್ಣ ಸೂಗುರು,ರಮೇಶ ಗುತ್ತೇದಾರ, ರಾಮು ಪಾಳದಕೇರಾ,ಕಾರ್ಯದರ್ಶಿ ಮಹೇಶ ಜಾಲಿಬೆಂಚಿ,ಕಾರ್ಯಕಾರಿಣಿ ಸದಸ್ಯರಾದ ಪರಮಗೌಡ ಮಕಾಶಿ,ಗೋಪಾಲ ವಾಗಣಗೇರಾ ಸೇರಿದಂತೆ ಆರೋಗ್ಯ ಇಲಾಖೆಯ ಅನೇಕ ಸಿಬ್ಬಂದಿಗಳು ಹಾಉ ಪಕ್ಷದ ಕಾರ್ಯಕರ್ತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here