ಪೋಷಣಾ ಅಭಿಯಾನ ಮಾಸಾಚರಣೆ ಉದ್ಘಾಟನೆ

0
16

ಆಳಂದ: ಪಟ್ಟಣದ ಶರಣನಗರದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಆಳಂದ ವಲಯದ ಆಶ್ರಯದಲ್ಲಿ ಆಯೋಜಿಸಿದ್ದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮವನ್ನು ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ ಅವರು ಉದ್ಘಾಟಿಸಸಿದರು.

ಬಳಿಕ ಮಾತನಾಡಿದ ಅವರು, ಆರೋಗ್ಯಯುಕ್ತ ಜೀವನಕ್ಕೆ ಸರ್ಕಾರ ಬಡವರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಪಡೆದು ಮುಂದೆ ಬರಬೇಕು ಎಂದು ಹೇಳಿದರು.
ಗ್ರೇಡ್-2 ತಹಸೀಲ್ದಾರ ಬಸವರಾಜ ರಕ್ಕಸಗಿ, ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ, ಸಿಡಿಪಿಒ ಶಿವಮೂರ್ತಿ ಕುಂಬಾರ, ಶಿರಸ್ತೆದಾರ ಮನೋಜ ಲಾಡೆ ಆಗಮಿಸಿದ್ದರು.

Contact Your\'s Advertisement; 9902492681

ಈ ವೇಳೆ ಕೈತೂಳೆದುಕೊಳ್ಳುವುದು, ಮಗುವಿಗೆ ಅನ್ನ ಪ್ರಹಾಸನ, 9ಮಂದಿ ಗರ್ಭೀಣಿಯರಿಗೆ ಸಿಮಂತ ಕಾರ್ಯಕ್ರಮ, ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕ ಕುರಿತು ವ್ಯಾಕ್ಯೆಗಳ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಉತ್ತಮ ಕಾರ್ಯ ನಿರ್ವಹಿಸಿದ ಐವರು ಕಾರ್ಯಕರ್ತೆಯರಿಗೆ ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು. ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ನಡೆಯಿತು.

ಜಿಪಂ ಮಾಜಿ ಸದಸ್ಯೆ ಪೂಜಾ ರಮೇಶ ಲೋಹಾರ ಮಾತನಾಡಿದರು. ಚೌಡೇಶ್ವರಿ ಕಮೀಟಿ ಸದಸ್ಯ ಶ್ರೀಮಂತ ಜನವೇರಿ, ಪುರಸಭೆ ಸದಸ್ಯ ಮೃತ್ಯುಂಜಯ ಆಲೂರೆ, ರಾಜಕುಮಾರ ಷಣ್ಮೂಖ, ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಲಿಂಗರಾಜ ಬುಕ್ಕೆ, ಡಾ| ಪ್ರಥ್ವಿರಾಜ ಚವ್ಹಾಣ, ಹಿರಿಯ ಮೇಲ್ವಿಚಾರಕಿ ಸೂರೆಖಾ ಮತ್ತಿತರು ಉಪಸ್ಥಿತರಿದ್ದರು.

ಪೌಷ್ಠಿಕ ಆಹಾರ ಶ್ರೀಧಾನ್ಯಗಳ ಬಳಕೆ ಹಣ್ಣು, ಹಂಫಲ ಮತ್ತು ತರಕಾರಿ ಬಳಕೆಯಿಂದ ಆರೋಗ್ಯಕ್ಕೆ ಪೂರಕದ ಕುರಿತು ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಮಾಹಿತಿ ನೀಡಲಾಯಿತು.
ಲಕ್ಷ್ಮೀಗೌಡರ ನಿರೂಪಿಸಿದರು. ಅಂಗನವಾಡಿ ಮೇಲ್ವಿಚಾರಕಿ ಮಹಾದೇವ ವಚ್ಛೆ ಸ್ವಾಗತಿಸಿದರು. ಪುಷ್ಪಾವತಿ ಚಟ್ಟಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here