ಗಾಂಧಿಜೀ ಹೆಸರನಲ್ಲಿ ಇಲ್ಲಿ ದೇವಸ್ಥಾನ: ನಿತ್ಯ ಪೂಜೆ

0
61

ಭಾರತದ ಸ್ವಾತಂತ್ರ್ಯ ಮತ್ತು ಬ್ರಿಟಿಷ್ವಿರುದ್ದ ಹೋರಾಟ, ಎಂದರೆ ಚಿಕ್ಕ ಮಗು ವಿನಿಂದ ಹಿಡುದು ಇಳಿವಯಸ್ಸಿನವರೆಗೂ ಮೊದಲು ನೆನಪಾಗುವುದು ಗಾಂಧಿಜಿ. ಅಂತಹ ಮಾಹಾತ್ಮರಿಗೆ ದೇಶ ಉದ್ದಗಲಕ್ಕೂ ಬರಿ ದೇಶದಲ್ಲಿ ಅಲ್ಲಿ ವಿದೇಶದಲ್ಲಿಯೂ ಅಭಿಮಾನಿಗಳಿದ್ದಾರೆ.

ಆದರೆ ಯಾದಗಿರಿಯಲ್ಲಿ ಅವರಿಗಾಗಿ ಮಂದಿರ ನಿರ್ಮಾಣ ಮಾಡಿದ ಗಾಂಧಿವಾದಿ, ಮಹಾತ್ಮಗಾಂಧಿ ಅವರ ಪ್ರಮುಖ ತತ್ವಸಿದ್ದಾಂತ ವೆಂದರೆ ಅದು ಸತ್ಯ ಮತ್ತು ಅಹಿಂಸೆ, ಸರಳತೆ ಇವುಗಳನ್ನು ರುಡಿಸಿಕೊಂಡು ಅವರ ಅಭಿಮಾನಿಯಾಗಿ ದ್ಹಂಪಣ್ಣಗೌಡ ಅವರು 1948ರಲ್ಲಿ ನಾಥೋರಾಮ ಗೋಡ್ಸೆ, ಗಾಂಧಿಜೀ ಅವರನು ಹತ್ಯೆಮಾಡಿದಾಗ, ಹಂಪಣ್ಣಗೌಡ ಅವರು ಬಲ ಶೆಟ್ಟಿ ಹಾಳ ಮಂಡಲದ ಸದಸ್ಯರಾಗಿದ್ದರು, ಈ ಸಾವಿನಸುದ್ದಿಯನ್ನು ಕೇಳಿ ತಲ್ಲಣ್ಣಗೊಂಡ, ಗಾಂಧೀಜಿ ಬಗ್ಗೆ ತಮ್ಮಗಿರುವ ಅಭಿಮಾನಕ್ಕಾಗಿ ಮತ್ತು ದೇಶಕ್ಕೆ ಸ್ವಾಂತ್ರ್ಯ ಸಿಕ್ಕು ಗಾಂಧೀಜಿ ದೇಹಾಂತವಾದ ಮೇಲೆ ಅವರತ್ಯಾಗ, ಬಲಿದಾನ, ಸಿದ್ಧಾಂತಗಳು ಜನಮನದಲ್ಲಿ ನೆಲೆಸಲೆಂದು 1949 ರಲ್ಲಿ ಅವರಿಗಾಗಿ ಯಾದಗಿರಿ ಜಿಲ್ಲೆಯ ನೂತನ ಹುಣಸಗಿ ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ದೇವಾಸ್ಥಾನ ಕಟ್ಟಿಸಿ ಮೂರ್ತಿ ಮಾಡಿಸಿದರು.

Contact Your\'s Advertisement; 9902492681

ರಾಷ್ಟ್ರಪಿತಾ ಗಾಂಧೀಜಿ ಅವರ ದೇವಸ್ಥಾನ ನಿರ್ಮಿಸಿ ಗೌರವ ಸಲ್ಲಿಸಿದ್ದರು. ಅದಾದಬಳಿಕ ಕೆಲವೂದಿನಗಳ ನಂತರ ಈ ದೇವಸ್ಥಾನದ ಕಟ್ಟೆ ನ್ಯಾಯಕಟ್ಟೆಯಾಗಿ ಬದಲಾಗಿ ಈ ಊರಲ್ಲಿ ಯಾವುದೇ ಸಮಸ್ಯೆ ಇದ್ದರೆ ಹಂಪಣ್ಣಗೌಡ ಅವರ ನೇತೃತ್ವದಲ್ಲಿ ನ್ಯಾಯಸಿಗುತ್ತಿತ್ತು.
ಅಂದಿನಿಂದ ಇಂದಿನವರೆಗೂ ಈಗ್ರಾಮದಲ್ಲಿ ಆ.2ರಂದು ಮತ್ತು ರಾಷ್ಟ್ರೀಯ ಹಬ್ಬಗಳಂದು ಈ ದೇವಸ್ಥಾನಕ್ಕೆ ಸುಣ್ಣ ಬಣ್ಣಮಾಡಿ, ಮೂರ್ತಿಗೆ ಅಲಂಕಾರ ಮಾಡಿ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ.

ಈ ಗುಡಿಯನ್ನು ಕಟ್ಟಿಸಿದ ಹಂಪಣ್ಣ ಗೌಡ ಚಿಂಚೋಳಿ ಅವರು 1995ರಲ್ಲಿ ಮರಣಹೊಂದಿದ್ದು, ಅಂದಿನಿಂದ ಇಲ್ಲಿವರೆಗೂ ಅವರ ಸುಪುತ್ರನಾದ ಬಸವರಾಜ ಚಿಂಚೋಳಿ ಅವರ ನೇತೃತ್ವದಲ್ಲಿ ದಿನವೂ ಪೂಜೆ ನೆರೆವೇರುತ್ತದೆ. ಭಾರತ ಇತಿಹಾಸದಲ್ಲಿ ಗಾಂಧಿ ಹೆಸರು ಅಜರಮಾರಮಾಗಿ ಉಳಿಯಲ್ಲೂ, ಯುವಜನರಿಗೆ ಅವರ ಆದರ್ಶ, ತತ್ವಗಳ ಮತ್ತು ಅವರ ಸ್ಮರಣಾರ್ಥನಮ್ಮ ಗ್ರಾಮದಲ್ಲಿ ಗಾಂಧಿ ಗುಡಿ ಇರುವುದು ನಮ್ಮ ಗ್ರಾಮದ ಹೆಮ್ಮೆ ಸತ್ಯಪ್ಪನಬೆನ್ನು ಹತ್ತಿದರು.

ಸತ್ಯವನ್ನೇ ಉತ್ತರು.
ಸತ್ಯವನ್ನೇ ಬಿತ್ತಿದರು.
ಸತ್ಯಕ್ಕಾಗಿ ಜೀವತೆತ್ತರು.
ಅವರಿಂದಾಯಿತು ಸತ್ಯದನಾಂದಿ.
ಅವರೇ ಮಾಹಾತ್ಮಾಗಾಂಧಿ.

(ಕ.ಸಾ.ಪ ಅಧ್ಯಕ್ಷರು ಕೋಡೆಕಲ ಬಸಣ್ಣಗೋಡ್ರಿ) ಎಂದು ನಾಗೇಶ್ಗೋಡ್ರಿ ಅಭಿಪ್ರಾಯ ತಿಳಿಸಿದರು. ಆದರೆ ಇದರ ಅಭಿವೃದ್ದಿ ಕಡೆ ಸರಕಾರ ಗಮನ ವಹಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.


ನಾಗೇಶ್ ಗೋಡ್ರಿ

ರಾಜುಗೌಡ ಸೇವಾ ಸಮಿತಿ ಕೊಡೇಕಲ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here