ಕಲಬುರಗಿ: ನಗರದ ಜಿ ಆರ್ ನಗರ ೨೫ನೇ ಬಡಾವಣೆಯಲ್ಲಿ ಭಾರತಿ ಯುವ ಸೈನ್ಯ ಹಾಗೂ ಕಟ್ಟಡ ಮತ್ತು ಕಾರ್ಮಿಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕರೋನಾ ದಿಂದ ಸಂಕಷ್ಟದಲ್ಲಿದ್ದ ಬಡ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ಟ ವಿತರಿಸಲಾಯಿತು ಭಾರತಿ ಯುವ ಸೈನ್ಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಚಿಂಚನಸೂರ, ಇವರ ನೇತೃತ್ವದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀನಿವಾಸ ರಾಜು ದೊಣ್ಣೆಗೆರಿ, ಕರ್ನಾಟಕ ಪೊಲೀಸ್ ಮಹಾಸಂಘ ಜಿಲ್ಲಾಧ್ಯಕ್ಷರಾದ ರವಿ ದೇಗಾಂವಾ, ದಲಿತ ಸೇನೆ ಜಿಲ್ಲಾ ಉಪಾಧ್ಯಕ್ಷರಾದ ಶ್ರೀಕಾಂತ್ ರೆಡ್ಡಿ, ರಾಜು ಚೌಹಾಣ ಭಾರತಿ ಯುವ ಸೈನ್ಯ ಗೌರವಾಧ್ಯಕ್ಷರು, ಶಕೀಲ್, ನೂರು, ಮತ್ತು ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯಮಾನ್ಯರು ಭಾಗವಹಿಸಿದರು.