ಸುರಪುರ: ತಾಲೂಕಿನ ಶೆಳ್ಳಗಿ ಬಳಿಯ ಕೃಷ್ಣಾ ನದಿಗೆ ಸ್ನಾನಕ್ಕೆ ಹೋಗಿ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಬುಧವಾರ ಮದ್ಹ್ಯಾನ ನಡೆದಿದೆ.ಜೇವರ್ಗಿ ತಾಲೂಕಿನ ನಂದಿಹಾಳದವನು ಎಂದು ಹೇಳಲಾಗುವ ಶಂಕರಪ್ಪ ಎನ್ನುವ ೪೦ ವರ್ಷದ ವ್ಯಕ್ತಿ ನಾಪತ್ತೆಯಾದ ದುರ್ದೈವಿಯಾಗಿದ್ದಾನೆ.
ಕವಡಿಮಟ್ಟಿ ಬಳಿಯ ಗುಡಿಹಾಳ(ಜೆ) ಗ್ರಾಮದ ಬಳಿಯಲ್ಲಿ ನಡೆದಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ,ಬುಧವಾರ ಅಮವಾಸ್ಯೆಯ ಅಂಗವಾಗಿ ಕೆಲಸಕ್ಕೆ ರಜೆ ಇದ್ದ ಕಾರಣ ಇತರೆ ಕಾರ್ಮಿಕರೊಂದಿಗೆ ಕೃಷ್ಣಾ ನದಿಯಲ್ಲಿ ಸ್ನಾನಕ್ಕೆ ಹೋದಾಗ ದುರ್ಘಟನೆ ಸಂಭವಿಸಿದೆ.
ನಾಪತ್ತೆಯಾದ ವ್ಯಕ್ತಿಗಾಗಿ ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಹುಡುಕಾಟದ ಕಾರ್ಯಾಚರಣೆ ನಡೆಸಿದ್ದಾರೆ.