ಅಪಾಯಕಾರಿ ಚರಂಡಿ ಮುಚ್ಚಲು ಪೋಷಕರ ಆಗ್ರಹ

0
87
ತಾಲ್ಲೂಕಿನ ತಿಂಥಣಿ ಗ್ರಾಮದ ಸರಕಾರಿ ಶಾಲೆ ಬಳಿಯಲ್ಲಿ ತೆರೆದ ಚರಂಡಿ ದಾಟಿಕೊಂಡು ಸಾಗುತ್ತಿರುವ ಮಕ್ಕಳು
  • ರಾಜು ಕುಂಬಾರ

ಸುರಪುರ: ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯದ್ವಾರದ ಬಳಿಯಲ್ಲಿ ತೆರೆದ ಚರಂಡಿಯನ್ನು ಕಂಡು ಮಕ್ಕಳ ಪೋಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕ ಮಕ್ಕಳು ಶಾಲೆಗೆ ಹೋಗಬೇಕಾದರೆ ಚರಂಡಿ ದಾಟಿಕೊಂಡು ಹೋಗಬೇಕು.ಅಲ್ಲದೆ ಈ ಚರಂಡಿ ಪಕ್ಕದಿಂದಲೆ ಬೈಕ್,ಮೋಟಾರು ವಹನಗಳು ಓಡಾಡುತ್ತವೆ.ಇದರಿಂದ ಅಪಾಯ ಹೆದರಿಸಬೇಕಾಗಿದೆ. ಸದಾಕಾಲ ಚರಂಡಿಯಲ್ಲಿ ಮನೆಗಳಿಂದ ಬರುವ ಹೊಲಸು ನೀರು ಹರಿಯುವದರಿಂದ ಗಬ್ಬು ನಾತ ಬೀರುತ್ತದೆ.ಅಲ್ಲದೆ ಸೊಳ್ಳೆಗಳು ಹುಟ್ಟಿಕೊಂಡು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

Contact Your\'s Advertisement; 9902492681

ಅನೇಕ ಬಾರಿ ಗ್ರಾಮ ಪಂಚಾಯತಿಗೆ ಮೌಖಿಕವಾಗಿ ತಿಳಿಸಿದರು ಯಾವ ಕ್ರಮ ಕೈಗೊಳ್ಳುತ್ತಿಲ್ಲ.ಇದರಿಂದ ಮಕ್ಕಳ ಪೋಷಕರಿಗೆ ಸ್ಥಳಿಯ ಪಂಚಾಯತಿ ಮತ್ತು ಶಾಲಾ ಮಂಡಳಿಯ ಮೇಲು ಬೇಸರ ಮೂಡುತ್ತಿದೆ.

ಯಾದಗಿರಿ ಜಿಲ್ಲಾ ಪಂಚಾಯತಿಯ ಹಾಲಿ ಅಧ್ಯಕ್ಷರಾಗಿರುವ ರಾಜಶೇಖರಗೌಡ ಪಾಟೀಲ ವಜ್ಜಲವರ ಕ್ಷೇತ್ರವ್ಯಾಪ್ತಿಯ ಈ ಗ್ರಾಮದಲ್ಲಿನ ಚರಂಡಿಯನ್ನು ಮುಚ್ಚಿಸುವ ಕೆಲಸವನ್ನು ಅಧ್ಯಕ್ಷರು ಮಾಡಬೇಕೆಂದು ಕರ್ನಾಟಕ ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮೌನೇಶ ಬೋವಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೂಡಲೆ ಗ್ರಾಮ ಪಂಚಾಯತಿ ಅಥವಾ ಶಿಕ್ಷಣ ಇಲಾಖೆ ಈ ಚರಂಡಿ ಮುಚ್ಚಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಗ್ರಾಮದ ಜನರು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here