ಬಂಗಾರದ ಪದಕ ಪಡೆದ ಹರ್ಷನಿಗೆ ಸನ್ಮಾನ

0
78

ಶಹಾಬಾದ: ಗೋವಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಶಾರ್ಟ್ ಫೂಟ್ ಎಸೆತದಲ್ಲಿ ಬಂಗಾರದ ಪದಕ ಪಡೆದ ಶಹಾಬಾದ ನಗರದ ಹರ್ಷ ರಾಮಣ್ಣಾ ಬೋಮ್ಮನಳ್ಳಿಕರ್ ಇವರಿಗೆ ಯುವ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಿರಣ್ ಚವ್ಹಾಣ,ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ.ಸಾಧಿಸುವ ಛಲವಿದ್ದಾಗ ಮಾತ್ರ ಸಾಧನೆ ಒಲಿದು ಬರುತ್ತದೆ ಎಂಬುದಕ್ಕೆ ಹರ್ಷ ರಾಮಣ್ಣಾ ಅವನೇ ಉದಾಹರಣೆ. ನಗರದ ಯುವಕನೊಬ್ಬ ಗೋವಾದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಶಾರ್ಟ್ ಫೂಟ್ ಎಸೆತದಲ್ಲಿ ಬಂಗಾರದ ಪದಕ ಪಡೆದಿರುವುದು ನಗರದ ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇನ್ನೂ ಈ ಯುವ ಸಾಧನೆ ಮಾಡಿ ನಗರದ ಹೆಸರನ್ನು ಎತ್ತರಕ್ಕೆ ತರಲಿ ಎಂದು ಹಾರೈಸಿದರು.

Contact Your\'s Advertisement; 9902492681

ವಾರ್ಡ ನಂ 17 ರ ಸದಸ್ಯೆ ಸಾಬೇರಾ ಬೇಗಂ, ಕಾಂಗ್ರೆಸ್ ಮುಖಂಡರಾದ ಮಹ್ಮದ್ ಇಮ್ರಾನ್, ಮಹಮ್ಮದ್ ಅಜರೋದ್ದಿನ್, ಅನ್ವರ್ ಪಾಶಾ ನಸಿರೋದ್ದಿನ್, ನಾಗಣ್ಣಾ ರಾಂಪೂರೆ, ಶೇರ್ ಅಲಿ, ರೆಹಮಾನ್ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here