ಕರುನಾಡು ವಿಜಯ ಸೇನೆ ನಿಂಗದಳಿ ಶಾಖೆ ಉದ್ಘಾಟನೆ

0
20

ಆಳಂದ: ತಾಲೂಕಿನ ನಿಂಗದಳ್ಳಿ ಗ್ರಾಮದಲ್ಲಿ ಕರುನಾಡು ವಿಜಯ ಸೇನೆ ಗ್ರಾಮ ಶಾಖೆಯನ್ನು ತಾಲೂಕು ಅಧ್ಯಕ್ಷ ಗುರು ಬಂಗರಗಿ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕರುನಾಡು ವಿಜಯ ಸೇನೆಯ ಮೂಲಕ ನಾಡು, ನುಡಿ ಕಟ್ಟುವ ಕೆಲಸ ಜೊತೆಗೆ ಜನಪರ ಹೋರಾಟದ ಉದ್ದೇಶವಾಗಿದೆ. ಹೋರಾಟದ ಮೂಲಕ ಜನರಿಗೆ ನ್ಯಾಯ ಒದಗಿಸಲು ಪದಾಧಿಕಾರಿಗಳು ಶ್ರಮಿಸಬೇಕು ಎಂದರು.

Contact Your\'s Advertisement; 9902492681

ಘಟಕದ ಅಧ್ಯಕ್ಷರನ್ನಾಗಿ ಶಿವರಾಜ ಪಾಟೀಲ ಅವರನ್ನು ನೇಮಕ ಮಾಡಲಾಯಿತು. ಮುಖಂಡ ರವಿಂದ್ರ ಪಟ್ಟಣಶೆಟ್ಟಿ, ಪ್ರವೀಣ ಮೊದಲೆ, ಸುರೇಶ, ನಾಗರಾಜ ಪಟ್ಟಣಶೆಟ್ಟಿ, ವಿರೇಶ ನಂದಿಕೋಲ ಖಜೂರಿ ಸೇರಿ ಇನ್ನಿತರು ಉಪಸ್ಥಿತರಿದ್ದರು. ಸೇನೆಯ ಮಾದನಹಿಪ್ಪರಗಾ ವಲಯ ಅಧ್ಯಕ್ಷರನ್ನಾಗಿ ಚಂದ್ರಕಾಂತ ಎಸ್. ಪಾಟೀಲ ಆಯ್ಕೆ ಮಾಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here