ಸುರಪುರ: ನಗರದ ಮುಜುಂದಾರಗಲ್ಲಿಯಲ್ಲಿನ ೧೭ನೇ ಶತಮಾನದ ಐತಿಹಾಸಿಕ ಪ್ರಸನ್ನ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷವಾದ ಶೇಷ ವಾಹನ ಪೂಜಾ ಕಾರ್ಯಕ್ರಮವನ್ನು ನಡೆಸಲಾಗಿದೆ.
ಮಂಗಳವಾರ ಬೆಳಿಗ್ಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪ್ರಸನ್ನ ವೆಂಕಟೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರಗೊಳಿಸಲಾಗಿದೆ.ಅಲ್ಲದೆ ಪೂಜಾ ಕಾರ್ಯಕ್ರಮದ ನಂತರ ಆಗಮಿಸಿದ ಎಲ್ಲಾ ಭಕ್ತರಿಗೆ ವಿಶೇಷವಾದ ಪ್ರಸಾದ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.ನಗರದ ಅನೇಕ ಜನರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.ಅಲ್ಲದೆ ನಗರದ ವಿವಿಧ ಪತ್ರಕರ್ತರಿಗೆ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೇವರಕೃಷ್ಣಾ ಆಚಾರ್ಯ, ಗುರುರಾಜ ಅಗ್ನಿಹೋತ್ರಿ,ಅನಂತ ಕೃಷ್ಣಾ,ಪವನ ಕುಲಕರ್ಣಿ,ನಗರಸಭೆ ಸದಸ್ಯ ನರಸಿಂಹಕಾಂತ ಪಂಚಮಗಿರಿ,ವೆಂಕಟೇಶ ಭಕ್ರಿ ಸೇರಿದಂತೆ ಅನೇಕರಿದ್ದರು.