ಭಾರತೀಯ ಸಂಸ್ಕøತಿ ಪಾಲಿಸಿದರೆ ಕಾನೂನು ಪಾಲಿಸಿದಂತೆ-ನ್ಯಾ: ಚಿದಾನಂದ ಬಡಿಗೇರ

0
12

ಸುರಪುರ: ಭಾರತ ಒಂದು ಐತಿಹಾಸಿಕ ದೇಶವಾಗಿದ್ದು ಇಲ್ಲಿಯ ಸಂಸ್ಕøತಿಯನ್ನು ಮನುಷ್ಯ ಪಾಲಿಸಿದರೆ ಇಂದಿನ ಕಾನೂನುಗಳನ್ನು ಪಾಲಿಸಿದಂತಾಗಲಿದೆ ಎಂದು ದಿವಾಣಿ ನ್ಯಾಯಾಧೀಶರು ಹಾಗು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಚಿದಾನಂದ ಬಡಿಗೇರ ಮಾತನಾಡಿದರು.

ತಾಲೂಕು ಕಾನೂನು ಸೇವಾ ಸಮಿತಿ ಹಾಗು ತಾಲೂಕು ನ್ಯಾಯವಾದಿಗಳ ಸಂಘದಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ನಿರಂತರವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಗುತ್ತಿದ್ದು ಸಾರ್ವಜನಿಕರು ಹೆಚ್ಚೆಚ್ಚು ಭಾಗವಹಿಸುವ ಮೂಲಕ ಕಾನೂನುಗಳನ್ನು ತಿಳಿದುಕೊಳ್ಳಬೇಕೆಂದರು.

Contact Your\'s Advertisement; 9902492681

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿಗಳಾದ ಜಿ.ಆರ್.ಬನ್ನಾಳ ಹಾಗು ನಂದನಗೌಡ ಪಾಟೀಲ್ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರಕುಳ ನಿಷೇಧ ಮತ್ತು ಕಾನೂನು ಸೇವಾ ಪ್ರಾಧಿಕಾರಗಳ ಧ್ಯೇಯ ಉದ್ದೇಶಗಳು ಮತ್ತು ಜನತಾ ನ್ಯಾಯಾಲಯ ವಿಷಯಗಳ ಕುರಿತು ಮಾತನಾಡಿ,ಮಹಿಳೆಯರು ಕೆಲಸ ಮಾಡುತ್ತಿರುವ ಸ್ಥಳದಲ್ಲಿರುವ ಮೇಲಾಧಿಕಾರಿ ಅಥವಾ ಸಹೋದ್ಯೋಗಿ ಮಹಿಳೆಯರ ಉಡಿಗೆ ತೊಡಿಗೆ ಬಗ್ಗೆ ಹಿಯ್ಯಾಳಿಸುವುದು,ಅಶ್ಲೀಲವಾಗಿ ಸನ್ನೆ ಮಾಡುವುದು,ಲೈಂಗಿಕ ಕಿರಕುಳ ನೀಡುವುದು ಅಪರಾಧವಾಗಿದ್ದು ಇಂತಹ ಸಂದರ್ಭದಲ್ಲಿ ಮಹಿಳೆ ಕಾನೂನಿನ ನೆರವು ಪಡೆಯಬಹದು ಮತ್ತು ಮೇಲಾಧಿಕಾರಿಗಳಿಗೆ ದೂರು ನೀಡಬಹುದು ಎಂದರು.

ಅಲ್ಲದೆ 1 ಲಕ್ಷ ಒಳಗಿನ ಆದಾಯ ಇರುವವರಿಗೆ,ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡದವರಿಗೆ ಉಚಿತ ಕಾನೂನು ನೆರವು ದೊರೆಯಲಿದೆ ಅಲ್ಲದೆ ಯಾರಾದರು ತಮ್ಮ ಆಸ್ತಿ ಪ್ರಕರಣ,ಸಂಬಂಧಿಕರೊಂದಿಗಿನ ಪ್ರಕರಣ ಹಾಗು ವೈಯಕ್ತಿಕ ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

ನಂತರ ಪಿಎಸ್‍ಐ ಕೃಷ್ಣಾ ಸುಬೇದಾರ ಮಾತನಾಡಿ,ಸಾರ್ವಜನಿಕರು ಅನುಕೂಲಕ್ಕಾಗಿ ಯಾವುದೇ ಸಂದರ್ಭದಲ್ಲಿ 112 ಉಚಿತ ಕರೆಯ ಮೂಲಕ ಪೊಲೀಸ್ ನೆರವನ್ನು ಪಡೆಯಲು ಸಾಧ್ಯವಿದೆ.ಆದ್ದರಿಂದ ಇದರ ಸದುಪಯೋಗವನ್ನು ಮಾಡಿಕೊಳ್ಳುವಂತೆ ತಿಳಿಸಿ,ನಂತರ 112 ನಂಬರ್‍ಗೆ ಕರೆ ಮಾಡಿ ಕೆಲವೆ ಸಮಯದಲ್ಲಿ ಪೊಲೀಸ್ ವಾಹನ ಹೇಗೆ ಬರಲಿದೆ ಎಂಬುದರ ಕುರಿತು ಪ್ರತ್ಯಕ್ಷವಾಗಿ ಕರೆ ಮಾಡಿ ತೋರಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷೆ ಶ್ರೀದೇವಿ ಪಾಟೀಲ್,ಬಿಇಒ ಮಹಾದೇವರಡ್ಡಿ,ಅರಣ್ಯಾಧಿಕಾರಿ ಮೌಲಾಲಿಸಾಬ್ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ ಮತ್ತು ನಿಂಗಣ್ಣ ಚಿಂಚೋಡಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಸಹಾಯಕ ಸರಕಾರಿ ಅಭಿಯೋಜಕ ರಾಘವೇಂದ್ರ ಜಹಾಗೀರದಾರ,ಹೆಚ್ಚುವರಿ ಸಹಾಯಕ ಸರಕಾರಿ ಅಭಿಯೋಜಕರಾದ ದಿದ್ಯಾರಾಣಿ,ನ್ಯಾಯವಾದಿ ಉದಯಸಿಂಗ್,ವಕೀಲರ ಸಂಘದ ಉಪಾಧ್ಯಕ್ಷ ಅಶೋಕ ಬಿ.ಕವಲಿ ವೇದಿಕೆ ಮೇಲಿದ್ದರು.

ಗೋಪಾಲ ತಳವಾರ ನಿರೂಪಿಸಿದರು,ಆದಪ್ಪ ಹೊಸ್ಮನಿ ಸ್ವಾಗತಿಸಿದರು ವಕೀಲ ನಾಗಪ್ಪ ಚವಲ್ಕರ್ ವಂದಿಸಿದರು.ಪರಮಾನಂದ ದೇಸಾಯಿ ಸೇರಿದಂತೆ ಅನೇಕ ಜನ ಶಿಕ್ಷಕಿಯರು ಹಾಗು ಸಾರ್ವಜನಿಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here