ಕಲಬುರಗಿ: ೭೨ನೇ ಸಂವಿಧಾನ ಸಮರ್ಪಣಾ ದಿನಾಚಾರಣೆ ನಿಮಿತ್ತ ನಗರದ ಜಗತ್ತ ವೃತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಕರ್ನಾಟಕ ಮಾದಿಗ ಸಮಾಜ ವಿಭಾಗಿಯ ಅಧ್ಯಕ್ಷ ಚಂದ್ರಕಾಂತ ನಾಟಿಕಾರ ಅವರು ಪುಷ್ಪ ನಮನ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸಿದ್ದಲಿಂಗ ಕಟ್ಟಮನಿ, ಮುಖಂಡರಾದ ಸಿದ್ದಾರ್ಥ ಕೋರವಾರ, ಕಾರ್ತಿಕ ನಾಟೀಕಾರ, ಅಮೃತ ಸಾಗರ, ರವಿ ಸಿಂಗೆ, ಸುದರ್ಶನ, ಅರ್ಜುನ ಇದ್ದರು.