ಹೊನಗುಂಟಾ ಗ್ರಾಮದಲ್ಲಿ ವಿಠ್ಠಲ ಹೇರೂರ ಅವರ ಪುಣ್ಯಸ್ಮರಣೆ

0
48

ಶಹಾಬಾದ: ಸಮೀಪದ ಹೊನಗುಂಟಾ ಗ್ರಾಮದಲ್ಲಿ ಶುಕ್ರವಾರ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ವತಿಯಿಂದ ದಿ.ವಿಠ್ಠಲ ಹೇರೂರ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.

ಹೊನಗುಂಟಾ ಕೋಲಿ ಸಮಾಜದ ಅಧ್ಯಕ್ಷ ದೇವಿಂದ್ರ ಕಾರೋಳ್ಳಿ ಮಾತನಾಡಿ, ರಾಜ್ಯದಾದ್ಯಂತ ಸುಧೀರ್ಘವಾಗಿ ನಾಲ್ಕು ದಶಕಗಳ ಕಾಲ ತಮ್ಮ ಬದುಕಿನಲ್ಲಿ ಕೋಲಿ (ಕಬ್ಬಲಿಗ) ಸಮಾಜವನ್ನು ಎಸ್.ಟಿ ಸೇರಿಸಲು ಹೋರಾಟ ಮಾಡುವುದರ ಜೊತೆಗೆ ರಾಜಕೀಯ ಶೈಕ್ಷಣಿಕ ಅಭಿವೃದ್ಧಿಗಾಗಿ ಮುಂದೆ ಬರಲು ಕೋಲಿ ಸಮಾಜವನ್ನು ಮುಖ್ಯ ವಾಹಿನಿಗೆ ತಂದಿರುತಕ್ಕಂತ ಮಹಾನ ನಾಯಕ ಅವರು. ಇಂಥ ಮಹಾನ್ ನಾಯಕನನ್ನು ನಾವು ಕಳೆದುಕೊಂಡಿದ್ದೇವೆ. ಹೇರೂರ ಅವರಿಗೆ ಸಮಾಜದ ಬಗ್ಗೆ ಇರುವ ಕಾಳಜಿ ನಾವೆಂದು ಮರೆಯುವಂತಿಲ್ಲ. ಅವರ ವಿಚಾರಗಳನ್ನು ನಮ್ಮ ಆದರ್ಶವನ್ನಾಗಿಟ್ಟು ನಾವು ಹೇರೂರರವರು ಹಾಕಿದ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.

Contact Your\'s Advertisement; 9902492681

ಹೊನಗುಂಟಾ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿವಕುಮಾರ ಬುರ್ಲಿ, ಶರಣು ಹಲಕರ್ಟಿ, ಭೀಮಣ್ಣಾ ಗೆಜ್ಜಿ, ಮಲ್ಲಿಕಾರ್ಜುನ ಹೈಯಾಳ, ಬಲಭೀಮ ಕಾರೋಳ್ಳಿ, ಗ್ರಾ.ಪಂ.ಸದಸ್ಯ ರಾಜು ಸಣಮೋ, ಸಾಯಬಣ್ಣ ಕೊಲ್ಲೂರ್, ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here