ಶಹಾಬಾದ: ಬಿ.ಜಿ.ಪಾಟೀಲರು ಬಿಜಿ ಇರುವುಂತ ವ್ಯಕ್ತಿಯಾದರೆ ಶಿವಾನಂದ ಪಾಟೀಲರು ಇಸಿ ಜನಸಾಮನ್ಯರಿಗೆ ಲಭ್ಯವಾಗುವ ವ್ಯಕ್ತಿಯಾಗಿದ್ದು, ಅವರಿಗೆ ತಮ್ಮ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಕಾಂಗ್ರೆಸ್ ಪಕ್ಷ ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಪಂಯಿಂದ ಜಿಪಂವರೆಗಿನ ಎಲ್ಲಾ ರಾಜಕೀಯ ಅನುಭವ ಹೊಂದಿದವರಾಗಿದ್ದಾರೆ.ಸಾಮನ್ಯ ವ್ಯಕ್ತಿಗಳು ಬಹಳ ಪ್ರೀತಿಯಿಂದ ಕಾಣುವ ವ್ಯಕ್ತಿತ್ವ ಅವರಲ್ಲಿದೆ. ಸರಳವಾಗಿ ಕೈಗೆಟುವ ವ್ಯಕ್ತಿಯಾಗಿರುವುದರಿಂದ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವ ಅವಕಾಶ ನಿಮಗೆ ಸಿಗಲಿದೆ.
ಅಲ್ಲದೇ ನಿಗೆ ಸ್ಪಂದಿಸುವ ಹಾಗೂ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿ ತೋರಿಸುತ್ತಾರೆ ಎಂಬುದಕ್ಕೆ ಇಲ್ಲಿನ ಜನರಿಗೆ ಗೊತ್ತಿದೆ.ಆದ್ದರಿಂದ ಬಿಜಿ ಇರುವ ಬಿ.ಜಿ.ಪಾಟೀಲರು ಏನು ಎಂಬುದು ಕಳೆದ ಆರು ವರ್ಷಗಳಲ್ಲಿ ಕಂಡಿದ್ದೆವೆ.ಆದ್ದರಿಂದ ಒಂದು ಅವಕಾಶ ನೀಡಿದರೇ ಶಿವಾನಂದ ಪಾಟೀಲರು ಏನು ಎಂಬುದು ಅಭಿವೃದ್ಧಿ ಮಾಡಿ ತೋರಿಸುತ್ತಾರೆ.ಅದಕ್ಕಾಗಿ ಬಿಜಿಗಿಂತ ಇಸಿ ಲಭ್ಯವಾಗುವ ಶಿವಾನಂದ ಪಾಟೀಲರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.