ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಲ್ಕ ಹೆಚ್ಚಳ: ಎಐಡಿಎಸ್‌ಒ ಆಕ್ರೋಶ

0
27

ವಾಡಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕವನ್ನು ಹೆಚ್ಚಿಸಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕ್ರಮವನ್ನು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎಐಡಿಎಸ್‌ಒ ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ ಹಾಗೂ ಕಾರ್ಯದರ್ಶಿ ಗೋವಿಂದ ಯಳವಾರ, ಮಂಡಳಿಯ ತೀರ್ಮಾನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ತರಗತಿಗಳು ಸರಿಯಾಗಿ ನಡೆಯದೆ ಅಭ್ಯಾಸದ ದಿನಗಳು ಏರುಪೇರು ಅನುಭವಿಸಿವೆ.

Contact Your\'s Advertisement; 9902492681

ಭೀಕರ ಪ್ರವಾಹದಿಂದಾಗಿ ಶೇ.೭೦ ರಷ್ಟು ಕೃಷಿ ನಷ್ಟದ ತೆಕ್ಕೆಗೆ ಜಾರಿದೆ. ಬಡ ರೈತ ಮತ್ತು ಕೃಷಿ ಕೂಲಿಕಾರ್ಮಿಕರ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬಡತನ, ಆರ್ಥಿಕ ಬಿಕ್ಕಟ್ಟು, ಕೋವಿಡ್‌ನಿಂದ ಎದುರಾದ ಸವಾಲುಗಳಿಂದ ಗ್ರಾಮೀಣ ಪೋಷಕರು ತತ್ತರಿಸಿದ್ದಾರೆ. ಇಂತಹ ಕುಟುಂಬಗಳ ಸಾವಿರಾರು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲೇ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು ಉದ್ಯೋಗ ಅರಸಿ, ಮನೆ ನಡೆಸುವ ಜವಾಬ್ದಾರಿ ಹೆಗಲೇರಿಸಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಥಹ ಕಷ್ಟದಾಯಕ ಪರಸ್ಥಿತಿಯಲ್ಲಿ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿ ವೇತನ ಹೆಚ್ಚಿಸಬಹುದಾಗಿತ್ತು. ಸರಕಾರಿ ಶಾಲೆ-ಕಾಲೇಜುಗಳನ್ನು ಹೆಚ್ಚು ಸ್ಥಾಪಿಸಿ ಅಗತ್ಯ ಬೋಧಕರನ್ನು ನೇಮಿಸುವ ಮೂಲಕ ಸಿಕ್ಷಣ ಪಡೆಯಲು ಪೂರಕ ವಾತಾವರಣಕ್ಕೆ ಉತ್ತೇಜನ ನೀಡಬೇಕಿತ್ತು ಎಂದು ಸಲಹೆ ನೀಡಿರುವ ಎಐಡಿಎಸ್‌ಒ ಮುಖಂಡರು, ಸರಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶೂಲ್ಕವನ್ನು ಏಕಾಏಕಿ ರೂ.೧೦೦ ಹೆಚ್ಚಿಸಿ ಬಡ ಮಕ್ಕಳ ಶಿಕ್ಷಣ ಭವಿಷ್ಯಕ್ಕೆ ಪೆಟ್ಟು ನೀಡಿದೆ ಎಂದು ಟೀಕಿಸಿದ್ದಾರೆ. ಕೂಡಲೇ ಶುಲ್ಕ ಹೆಚ್ಚಳದ ಈ ಶಿಕ್ಷಣ ವಿರೋಧಿ ನೀತಿಯನ್ನು ಕೈಬಿಡಬೇಕು. ನಿರ್ಲಕ್ಷ್ಯ ವಹಿಸಿದರೆ ವಿದ್ಯಾರ್ಥಿಗಳನ್ನು ಸಂಘಟಿಸಿ ಎಐಡಿಎಸ್‌ಒ ರಾಜ್ಯದಾಧ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here