ಜನರಲ್ ಬಿಪಿನ್ ರಾವತ್‌ಗೆ ಬಿಜೆಪಿ ಯುವ ಮೋರ್ಚಾ ಶ್ರದ್ಧಾಂಜಲಿ

0
8

ಸುರಪುರ: ಕಳೆದ ಬುಧವಾರ ತಮಿಳುನಾಡಿನ ಕೂನೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ನಿಧನಕ್ಕೆ ಬಿಜೆಪಿ ಯುವ ಮೋರ್ಚಾದಿಂದ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.ಈ ಸಂದರ್ಭದಲ್ಲಿ ಬಿಪಿನ್ ರಾವತ್ ಅವರ ಭಾವಿಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶ್ರವಣಕುಮಾರ ನಾಯಕ ಡೊಣ್ಣಿಗೇರಾ,ಉಪಾಧ್ಯಕ್ಷ ರಾಮನಗೌಡ ಬೈಲಾಪುರ್,ಶ್ರೀಕಾಂತ ದೊರೆ ಕಚಕನೂರ್,ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಗಂಗಾಧರ ನಾಯಕ ಅರಳಳ್ಳಿ,ಸಂತೋಷ ಮೇದಾ,ಲಕ್ಷ್ಮೀಕಾಂತ ದೇವರಗೋನಾಲ,ಮೌನೇಶ ಕೋನಾಳ,ತಿಗಳಪ್ಪ ಕವಡಿಮಟ್ಟಿ,ಮಲ್ಲು ಬಾದ್ಯಾಪುರ,ಭಿಮರಾಯ ದೇವು ಬೊಮ್ಮನಹಳ್ಳಿ,ಸುರೇಶ ಗೋನಾಲ,ಮೌನೇಶ,ಮಂಜು ಹಿರೇಮಠ ತಿಮ್ಮಾಪುರ,ಕೃಷ್ಣಕಾಂತ್ ಸೇರಿದಂತೆ ಅನೇಕರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here