ಕಲಬುರಗಿ: ನಗರದ ಜಗತ್ ವೃತ್ತದಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಪ್ರತಿಮೆಯ ಸಮ್ಮುಖದಲ್ಲಿ ಮೈತ್ರಿ ಫೌಂಡೇಶನ್ ವತಿಯಿಂದ ಶಿಕ್ಷಣ ಕ್ಷೇತ್ರದ ಮುಂದಾಳು ಮಾತೆ ಸಾವಿತ್ರಿಬಾಯಿ ಫುಲೆ ಅವರ ೧೯೧ನೇ ಜನ್ಮದಿನಾಚಾರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮೈತ್ರಿ ಫೌಂಡೇಶನ್ ಅಧ್ಯಕ್ಷ ಪ್ರಕಾಶ ಔರಾದಕರ್, ಕಾರ್ಯದರ್ಶಿ ರೇಣುಕಾ ಸಿಂಗೆ, ಸದಸ್ಯರಾದ ಸೋನುಬಾಯಿ ಆರ್ ಶೃಂಗೇರಿ, ಕುಮಾರಿ ಕವಿತಾ, ಸಿದ್ಧು ಖಜೂರಿ, ಗುರಣ್ಣಾ ಐನಾಪೂರ, ಗೀತಾ ಮುದಗಲ, ಬಸಮ್ಮ ಎಸ್ ಭೀಮಪೂರ ಇನ್ನಿತರರು ಇದ್ದರು.