ಕಲಬುರಗಿ: ನಗರದ ತಾರಫೈಲ್ ಬಡಾವಣೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯೆ ನಿಂಗಮ್ಮ ಕಟ್ಟಿಮನಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್, ಶಾಲೆಯ ಮುಖ್ಯೋಪಾಧ್ಯಾಯ ಶಿವರಾಮ ರಾಠೋಡ, ಸಿಆರ್ಪಿ ಅದ ಓಂಕಾರ ಸ್ವಾಮಿ, ಅನುದಾನಿತ ಶಾಲೆಗಳ ಜಿಲ್ಲಾಧ್ಯಕ್ಷ ಹಣಮಂತ ಮರಡಿ, ಮಲ್ಲಿಕಾರ್ಜುನ ಖರ್ಗೆ, ಶಾಲೆಯ ಮುಖ್ಯೋಪಾಧ್ಯಾಯ ಪ್ರಕಾಶ ಪಾಟೀಲ್, ಶಿಕ್ಷಕರಾದ ರಜನಿಕಾಂತ ಶಿವಕೇರಿ, ಸೂರ್ಯಕಾಂತ, ಸುನೀಲ ದತ್ತ, ಶ್ರೀನಿವಾಸ, ಶೋಭಾ ಪಾಟೀಲ, ಸುಚಂದ್ರ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.