ಪ್ರೊ. ಚಂಪಾಗೆ ಭಾವಪೂರ್ಣ ಶೃದ್ಧಾಂಜಲಿ

0
20

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಚಂಪಾ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಕಾರ್ಯಕ್ರಮವನ್ನು ನೆರವೇರಿತ್ತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಕನ್ನಡ ಸಾಹಿತ್ಯದಲ್ಲಿ ಅಪೂರ್ವ ಸೇವೆಗೈದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರೊ.ಚಂದ್ರಕಾಂತ ಪಾಟೀಲ (ಚಂಪಾ) ಅವರು ನಿಧನಗೊಂಡಿರುವುದು ಎಲ್ಲಾ ಕನ್ನಡ ಮನಸ್ಸುಗಳಿಗೆ ನೋವನ್ನುಂಟು ಮಾಡಿದೆ. ಕನ್ನಡಪರ ಹೋರಾಟದಲ್ಲಿ ಚಂಪಾ ಅವರು ಮುಂಚೂಣಿಯಲ್ಲಿದ್ದ ನಾಯಕರು. ಸಂಕ್ರಮಣ ಪತ್ರಿಕೆಯ ಸಂಪಾದಕರಾಗಿ ಕನ್ನಡ ಮನಸ್ಸುಗಳಲ್ಲಿ ವೈಚಾರಿಕತೆಯ ಅರಿವನ್ನು ಮೂಡಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅನೇಕ ವೈಶಿಷ್ಟ್ಯಪೂರ್ಣವಾದಂತಹ ಕಾರ್ಯಗಳನ್ನು ಮಾಡಿದರು.

Contact Your\'s Advertisement; 9902492681

ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಯ ಮೇಲೆ ಅವರಿಗೆ ಅಪಾರ ಗೌರವ. ಅದಕ್ಕಾಗಿಯೇ ಅವರು ಮಠ ವ್ಯವಸ್ಥೆಯನ್ನು ಒಪ್ಪದಿದ್ದರೂ ಅವರು ಭಾಲ್ಕಿ ಹಿರೇಮಠ ಗಡಿಭಾಗದಲ್ಲಿ ಮಾಡಿರುವ ಮಾಡುತ್ತಿರುವ ಕನ್ನಡ ಕಟ್ಟುವ ಕೆಲಸವನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಶ್ರೀಮಠಕ್ಕೆ ಭೇಟಿ ನೀಡಿ ಕನ್ನಡದ ಮಠ ಕನ್ನಡ ಪಟ್ಟದ್ದೇವರೆಂದು ಭಾವಿಸಿ ತಮ್ಮ ದರ್ಶನಕ್ಕೆ ಬಂದಿದ್ದೇನೆ ಎಂದು ಅಭಿಮಾನದಿಂದ ಹೇಳಿದ್ದು ಸ್ಮರಿಸುತ್ತಾ ಅವರಿಗೆ ಭಾವಪೂರ್ಣ ಶೃದ್ಧಾಂಜಲಿಯನ್ನು ಅರ್ಪಿಸಿದರು.

ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಶ್ರೀ ನಿರಂಜನ ಮಹಾಸ್ವಾಮಿಗಳು, ಶ್ರೀ ರಮೇಶ ಪಟ್ನೆ, ಶ್ರೀ ಶಾಂತಯ್ಯ ಸ್ವಾಮಿ, ಶ್ರೀ ನಾಗರಾಜ ಗೊರನಾಳೆ, ಶ್ರೀ ರಾಜು ಜುಬರೆ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here