ನಗನೂರು ಶ್ರೀ ಶಕ್ತಿ ಜ್ಞಾನ ವಿಕಾಸ ಕೇಂದ್ರ ವಿಚಾರಗೋಷ್ಠಿ

0
9

ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃಧ್ಧಿ ಯೋಜನೆ ಮತ್ತು ನಗನೂರು ಶ್ರೀ ಶಕ್ತಿ ಜ್ಞಾನ ವಿಕಾಸ ಕೇಂದ್ರ ಸಭೆಯಲ್ಲಿ ವಿಚಾರಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಗೌರವಧ್ಯಕ್ಷತೆ ವಹಿಸಿಕೊಂಡಿದ್ದ ನಗನೂರು ಸೂಗುರೇಶ್ವರ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹಾಗು ಕಂಡಪ್ಪ ಮುತ್ಯಾ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

Contact Your\'s Advertisement; 9902492681

ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಪ್ರಾರಂಭ ಹಾಗು ಸಂಸ್ಥೆಯ ಕಾರ್ಯಕ್ರಮಗಳು ಮತ್ತು ಜ್ಞಾನ ವಿಕಾಸ ಕಾಂiiಕ್ರಮದ ಆಶಯ,ಸಂಘದ ಮೂಲಕ ಸದಸ್ಯರಲ್ಲಿ ಉಳಿತಾಯ,ಆರ್ಥಿಕ ಶಿಸ್ತು ಕಲಿಸುತ್ತಿರುವ ಬಗ್ಗೆ ತಿಳಿಸಿಕೊಟ್ಟರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ವಕೀಲ ವಿಶ್ವನಾಥರಡ್ಡಿ ಮಾತನಾಡಿ,ಮಹಿಳಾ ಶಿಕ್ಷಣ,ಮಹಿಳೆಯರ ಆಸ್ತಿ ಹಕ್ಕು ಮತ್ತು ಮಹಿಳೆಯರ ಮದುವೆ ವಯಸ್ಸು ೨೧ ವರ್ಷದ ನಂತರ ಮಾಡುವ ಕುರಿತು ಬದಲಾದ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯಗುರು ಅಯ್ಯಣ್ಣ,ಶಿಕ್ಷಕರಾದ ಭೀಮಾ ಸಿಂಗ್,ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸವಿತಾ,ವಲಯ ಮೇಲ್ವಿಚಾರಕರಾದ ಶಶಿಕುಮಾರ್,ಕಛೇರಿ ಸಹಾಯಕ ರಮೇಶ್ ಸೇವಾ ಪ್ರತಿನಿಧಿಗಳು ಹಾಗು ಸದಸ್ಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here