ಅಂಬಿಗರ ಚೌಡಯ್ಯನವರ ಜಯಂತಿ ಸರಳವಾಗಿ ಆಚರಿಸೋಣ: ಭಂಡಾರೆಪ್ಪ ನಾಟಿಕಾರ್

0
6

ಸುರಪುರ: ರಾಜ್ಯದಲ್ಲಿ ಕೊರೊನಾ ಸೊಂಕು ದಿನೆ ದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದೇ ೨೧ ನೇ ತಾರೀಖು ಆಚರಿಸಲಿರುವ ನಮ್ಮ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರಕಾರ ಸರಳವಾಗಿ ಆಚರಿಸಲು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಎಲ್ಲರು ಸರಕಾರದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಸರಳವಾಗಿ ಜಯಂತಿಯನ್ನು ಆಚರಿಸೋಣ ಎಂದು ಸುರಪುರ ತಾಲೂಕು ಕೋಲಿ ಕಬ್ಬಲಿಗ (ಗಂಗಾಮತ) ಸಮಾಜದ ಅಧ್ಯಕ್ಷ ಭಂಡಾರೆಪ್ಪ ನಾಟಿಕಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ೨೧ನೇ ತಾರೀಖು ಮುಂಜಾನೆ ೮ ಗಂಟೆಗೆ ಬೋವಿಗಲ್ಲಿಯಲ್ಲಿರುವ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಸಮಾಜದ ವತಿಯಿಂದ ಜಂತಿಯನ್ನು ಆಚರಿಸಲಾಗುವುದು.ಆದ್ದರಿಂದ ಎಲ್ಲ ನಮ್ಮ ಸಮಾಜದ ಬಂಧುಗಳು ಮತ್ತು ಅಂಬಿಗರ ಚೌಡಯ್ಯನವರ ಅಭಿಮಾನಿಗಳು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here