ಮಾಯಾವತಿ ಮುಂದಿನ ಪ್ರಧಾನ ಮಂತ್ರಿ ಆಗಬೇಕು : ರಾಜ್ಯ ಕಾರ್ಯದರ್ಶಿ ಸೂರ್ಯಕಾಂತ ನಿಂಬಾಳಕರ್

0
133

ಕಲಬುರಗಿ: ಕಮಾಲಾಪುರನಲ್ಲಿರುವ  ಬಾಬಾ ಸಾಹೇಬ್ ಡಾ ಅಂಬೇಡ್ಕರ್ ಭವನದಲ್ಲಿ ಬಿಎಸ್‌ಪಿ ತಾಲೂಕ ಸಮಿತಿಯಿಂದ ಮಂಗಳವಾರ ಬಾವಿ ಪ್ರಧಾನ ಮಂತ್ರಿ ಮಾಯಾವತಿ ಅವರ ೬೬ನೇ ಜನ್ಮದಿನವನ್ನು ಜನಕಲ್ಯಾಣ ದಿನವಾಗಿ ಆಚರಿಸಲಾಯಿತು.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳು ಅಕ್ಕ ಮಾಯಾವತಿ ಜೀ ಅವರ ೬೬ನೇ ಜನ್ಮದಿನವನ್ನು ಬೈಕ್ ರಾಲಿ ಮಾಡುವುದರ ಮುಲಕ ಕಲಬುರಗಿ ಗ್ರಾಮೀಣ ತಾ.ಕಮಾಲಾಪುರ ನಗರದಲ್ಲಿ ತುಂಬಾ ಅರ್ಥ ಪೂರ್ಣವಾಗಿ  ಆಚರಣೆಯನ್ನು ಮಾಡಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮಕ್ಕೆ ರಾಜ್ಯ ಕಾರ್ಯದರ್ಶಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸೂರ್ಯಕಾಂತ ನಿಂಬಾಳಕರ್ ಅವರು ಉದ್ಘಾಟಿಸಿ ಮಾತನಾಡುತ್ತಾ ಭಾರತದ ಪ್ರಜಾಪ್ರಭುತ್ವ ಸಂವಿಧಾನವು ಉಳಿಬೇಕು ಅಂದರೆ ಮಾಯಾವತಿ ಜೀ  ಅವರು ಭಾರತದ ಪ್ರಧಾನ ಮಂತ್ರಿ ಆಗಬೇಕು ಅವಾಗಲೆ ಸಭಕ್ ಸಾತ್ ಸಭಕ್ ವಿಕಾಶ ಆಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಕಾರ್ಯದರ್ಶಿ ಎಲ್ ಆರ್ ಬೋಸ್ಲೇ ಭಾಗವಹಿಸಿದರು. ಕಲಬುರಗಿ ಜಿಲ್ಲಾ ಸಂಯೋಜಕ  ಜೈಭೀಮ ಡಿ. ಶಿಂಧೆ,  ಜಿಲ್ಲೆಯ ಮಾಜಿ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಓಕಳ್ಳಿ, ತಾ.ಸಂಯೋಜಕರಾದ ಸತಿಶ ನಲ್ಲಿ, ರವಿ ಕೋರಿ, ತಾ.ಅಧ್ಯಕ್ಷ  ಅಂಬಾರಾಯ ಧಸ್ತಪುರ್, ವಿಜಯಕುಮಾರ ವಾದ್ರಿ, ವಿಜಯಕುಮಾರ  ಅಂಕಲಗಿ, ರೇಷ್ಮೆ, ಗುರುಲಿಂಗ ಪ್ರಬುದ್ಧಕರ, ಸಂಜುಕುಮಾರ, ಸುಭಾಶ ಚವ್ಹಾಣ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here