ಅನಿಷ್ಟ ಪದ್ಧತಿಗಳ ನಿವಾರಣೆಗೆ ವೇಮನರ ಪಾತ್ರ ಮಹತ್ವದ್ದು: ಅಂಜಲಿ ಗಿರೀಶ ಕಂಬಾನೂರ

0
7

ಶಹಾಬಾದ : ಸಾಮಾಜಿಕ ನ್ಯಾಯ, ಮಹಿಳೆಯರ ರಕ್ಷಣೆ, ವಿಧವೆಯರಿಗೆ ಸ್ಥಾನಮಾನ, ಹೆಣ್ಣು ಮಕ್ಕಳ ರಕ್ಷಣೆ, ಸಮಾಜದ ಕೆಲವು ಅನಿಷ್ಟ ಪದ್ದತಿಗಳ ನಿವಾರಣೆಗೆ ಮಹಾಯೋಗಿ ವೇಮನ ಅವರು ಸಾಕ? ದುಡಿದು, ಸಮಾಜ ಸುಧಾರಣೆ ಶ್ರಮಿಸಿದವರಲ್ಲಿ ಅಗ್ರಗಣ್ಯರಾಗಿದ್ದಾರೆ ಎಂದು ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ ಹೇಳಿದರು.

ಅವರು ಬುಧವಾರ ನಗರಸಭೆ ಕಾರ್ಯಾಲಯದಲ್ಲಿ ಆಯೋಜಿಸಲಾದ ’ಮಹಾಯೋಗಿ ವೇಮನ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಎಲ್ಲಾ ಮಹನೀಯರ ಅರಿವು ಯುವಪೀಳಿಗೆಗೆ ಇರಲಿ ಎಂಬ ಉದ್ದೇಶ. ಒಬ್ಬ ಶ್ರೀಮಂತ ಕುಟುಂಬದಲ್ಲಿ ಜನಿಸಿದ ವೇಮನರು ಭೋಗ ಜೀವನದಿಂದ ಹೊರಬಂದು ವೈರಾಗ್ಯ ಜೀವನವನ್ನು ಅರಸುವುದು ನಿಜಕ್ಕೂ ಅದ್ಬುತ ಸಂಗತಿ. ವೇಮನರ ದೂರದೃಷ್ಠಿ ಅರಿಯುವುದರ ಜೊತೆಗೆ ಅವರ ಆದರ್ಶವನ್ನು ಪ್ರತಿನಿತ್ಯ ಪಾಲಿಸಬೇಕು. ಇವರು ಮಲ್ಲಮ್ಮ ಮತ್ತು ಕುಮಾರಗಿರಿರೆಡ್ಡಿ ಅವರ ಮಗನಾಗಿ ಜನಿಸಿದರು. ತಮ್ಮ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಹಿತವಚನದಿಂದ ಸಮಾಜದ ಮಹಾಪುರು?ನಾದ. ಅವರ ವಚನಗಳ ಅಂಕಿತ ’ವಿಶ್ವದಾಭಿರಾಮ ಕೇಳೋ ವೇಮ’ ಎಂಬುದಾಗಿದೆ. ಆತ್ಮ ವಿಮರ್ಶೆ ಹಾಗೂ ಆತ್ಮ ಶುದ್ಧಿಯಿಂದ ಇದ್ದವ ಜಗತ್ತನ್ನೇ ಗೆಲ್ಲಬಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ ಎಂದರು.

ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ, ಸಮಾಜ ಸುಧಾರಕರ ಸಾಧನೆ ಸ್ಮರಿಸಲು ಸರ್ಕಾರ ಜಯಂತಿಗಳ ಆಚರಣೆ ಜಾರಿಗೆ ತಂದಿದೆ. ಜಯಂತಿಗಳ ಆಚರಣೆ ಮೂಲಕ ಸಮಾಜದ ಸಂಘಟನೆ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಸಮಾಜ ಸುಧಾರಕರ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡು, ಸಮಾಜ ಸೇವೆ ಮಾಡಬೇಕು. ಸಮಾಜಕ್ಕೆ ಪ್ರತಿನಿತ್ಯ ಕೊಡುಗೆ ನೀಡುತ್ತಲೇ ಇರಬೇಕು. ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದರು.

ನಗರಸಭೆಯ ಉಪಾಧ್ಯಕ್ಷೆ ಸಲೀಮಾಬೇಗಂ, ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ, ಶರಣಬಸಪ್ಪ ಪಗಲಾಪೂರ, ಶಿವರಾಜಕುಮಾರ, ರಘುನಾಥ ನರಸಾಳೆ,ನಾರಾಯಣರೆಡ್ಡಿ, ಶಂಕರ ಕುಸಾಳೆ, ಶಿವರಾಜ ಕೋರೆ,ಶಾಂತರೆಡ್ಡಿ ದಂಡಗುಲಕರ್ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here