ಅಂಬಿಗರ ಚೌಡಯ್ಯ ಫೋಟೋ ವಿಚಾರ: ಎರಡು ಗುಂಪುಗಳ ನಡುವೆ ಘರ್ಷಣೆ- ಸೆಕ್ಷನ್ 144 ಜಾರಿ

0
143

ಕಲಬುರಗಿ: ಅಂಬಿಗರ ಚೌಡಯ್ಯ ಮತ್ತು ಶ್ರೀ ರಾಮ ಫೋಟೋ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿರುವ ಘಟನೆ ಗುರುವಾರ ನಗರದ ಶಹಬಾಜಾರ್ ನಾಕಾದಲ್ಲಿ ನಡೆದಿದೆ.

ಮುಂಚಿತವಾಗಿ ಚೌಕ್ ನಲ್ಲಿ ಅಂಬಿಗರ ಚೌಡಯ್ಯ ಫೋಟೋ ಇದ್ದು, ಬಡಾವಣೆಯಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿ ಶ್ರೀ ರಾಮನ ಅನುಯಾಯಿಗಳು ಇದ್ದಾರೆ ಚೌಕನಲ್ಲಿ ಶ್ರೀರಾಮ ಫೋಟೋ ಇರಬೇಕೆಂದು ಫೋಟೋ ಹಚ್ಚುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

Contact Your\'s Advertisement; 9902492681

ನಂತರ ಸ್ಥಳಕ್ಕೆ ಚೌಕ್ ಪೊಲೀಸರು ಭೇಟಿ ನೀಡಿ, ವಾತಾವರಣ ತಿಳಿಗೊಳಿಸಲು ಯತ್ನಿಸಿದರು. ಘಟನೆ ವಿಕೋಪಕ್ಕೆ ತಿರುಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರು, ಪಿಎಸ್ ಐ ಹುಸೇನ್ ಬಾಷಾ, ಬ್ರಹ್ಮಪುರ ಪಿಎಸ್ ಐ ಸೇರಿದಂತೆ ಹಲವು ಪೊಲೀಸ್ ಅಧಿಕಾರಿ ಭೇಟಿ ನೀಡಿದರು.

ಸದ್ಯ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here