ಕರಡ್ಯಾಳ ಗುರುಕುಲ ಕಾಲೇಜಿನಲ್ಲಿ ದಾಸೋಹ ದಿನ ಆಚರಣೆ

0
17

ಭಾಲಿ: ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪದವಿಪೂರ್ವ ಕಾಲೇಜು ಕರಡ್ಯಾಳ ಆವರಣದಲ್ಲಿ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಪೂಜ್ಯ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳವರ ೩ನೇ ಪುಣ್ಯಸ್ಮರಣೆಯನ್ನು ದಾಸೋಹ ದಿನವನ್ನಾಗಿ ಆಚರಿಸಲಾಯಿತು.

ಪರಮಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಸನ್ನಿಧಾನವಹಿಸಿ, ಸಿದ್ಧಗಂಗಾ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ನಡೆದಾಡುವ ದೇವರೆಂದೇ ಪ್ರಖ್ಯಾತ ಪಡೆದವರು. ಅವರು ಬಸವಾದಿ ಶರಣರ ತತ್ವಸಿದ್ಧಾಂತಗಳನ್ನು ನಿಜಾಚರಣೆಯಲ್ಲಿ ತಂದ ಮಹಾನ್ ಶರಣರು. ೧೨ನೇ ಶತಮಾನದಲ್ಲಿ ಕಲ್ಯಾಣದ ಅನುಭವಮಂಟಪದಲ್ಲಿ ಸಾವಿರಾರು ಜನರಿಗೆ ದಾಸೋಹ ನಡೆಯುತ್ತಿತ್ತು ಎಂದು ನಾವು ಚರಿತ್ರೆಯಲ್ಲಿ ಓದುತ್ತೇವೆ.

Contact Your\'s Advertisement; 9902492681

ಇಂದಿನ ದಿನಮಾನಗಳಲ್ಲಿ ಅದೇ ದಾಸೋಹ ಪರಂಪರೆಯನ್ನು ಮುಂದುವರೆಸುತ್ತಾ ಸುಮಾರು ೧೦ ಸಾವಿರ ಮಕ್ಕಳಿಗೆ ದಿನನಿತ್ಯ ಅನ್ನ, ಜ್ಞಾನ ದಾಸೋಹ ಮಾಡುತ್ತಿರುವ ಪೂಜ್ಯರ ಕಾರ್ಯ ಎಲ್ಲ ಯುವ ಮಠಾಧೀಶರಿಗೆ ಆದರ್ಶಪ್ರಾಯ ಹಾಗೂ ಪ್ರೇರಕವಾಗಿದೆ. ಪೂಜ್ಯರು ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂಬ ಬಸವವಾಣಿಯನ್ನು ಅಕ್ಷರಸಹ ಬದುಕಿನಲ್ಲಿ ಅಳವಡಿಸಿಕೊಂಡವರು. ಶತಾಯುಷಿಗಳಾದರು ಲಿಂಗಪೂಜೆ, ಕಾಯಕ ಮತ್ತು ದಾಸೋಹ ನಿರಂತರವಾಗಿ ಮಾಡುತ್ತಲೇ ಬಂದಿರುವರು. ಅವರ ಲಿಂಗೈಕ್ಯ ದಿನವನ್ನು ಕರ್ನಾಟಕ ಸರಕಾರ ದಾಸೋಹ ದಿನವನ್ನಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ ಮತ್ತು ಅಭಿನಂದನೀಯವಾಗಿದೆ ಎಂದು ನುಡಿದರು.

ಸಮಾರಂಭದಲ್ಲಿ, ಸಂಸ್ಥೆ ಆಡಳಿತಾಧಿಕಾರಿಗಳಾದ ಶರಣ ಮೋಹನರೆಡ್ಡಿ, ಪ್ರಾಚಾರ್ಯರಾದ ಶರಣ ಬಸವರಾಜ ಮೋಳಕೆರೆ, ಉಪಪ್ರಾಚಾರ್ಯ ಶರಣ ಸಿದ್ರಾಮ ಗೊಗ್ಗಾ, ಪ್ರಾಚಾರ್ಯ ಮಹಾದೇವ ಪಟ್ನೆ, ಉಪನ್ಯಾಸಕರಾದ ರಾಮಕೃಷ್ಣ, ಸದಾವಿಜಯ, ಶೇಖರಗೌಡ, ಪುರುಶೋತ್ತಮ ಹಾಗೂ ನಿರಜ್ ಮತ್ತು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮುಂತಾದವರು ಉಪಸ್ಥಿತರಿದ್ದರು. ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ರಾಹುಲ್ ಪುಣೆ, ಸಚೀನ್ ಕಾರಬಾರಿ, ಚನ್ನಬಸವ ಸ್ವಾಮಿ ಇವರಿಂದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here