ಕಲಬುರಗಿ: ಸಾಲ ಬಾಧೆಗೆ ಮನನೊಂದು ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಯಡ್ರಾಮಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಯಡ್ರಾಮಿ ತಾಲ್ಲೂಕಿನ ಆಲೂರ ಗ್ರಾಮ ನಿವಾಸಿ ಬಸಪ್ಪ ಜುಮ್ಮಣ್ಣ ನಗನೂರ (55) ಆತ್ಮಹತ್ಯೆಗೆ ಶರಣಾದ ರೈತ. ಕೆಜಿಬಿ ಬ್ಯಾಂಕ್ನಲ್ಲಿ 1.5 ಲಕ್ಷ ಹಾಗೂ ಖಾಸಗಿ 6 ಲಕ್ಷ ಸಾಲ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತರಿಗೆ ಮೂವರು ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ. ಗ್ರಾಮದಲ್ಲಿ ಐದೂವರೆ ಹೆಕ್ಟೇರ್ ಜಮೀನು ಹೊಂದಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.