ದಲಿತ ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸಲು ದಲಿತ ಸೇನೆ ಮನವಿ

0
62

ಸುರಪುರ: ನಗರದ ಬಸ್ ಡಿಪೋದಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ಬಾಬು ರಾಠೋಡ ಮತ್ತು ಸಂತೋಷ ಕುಮಾರ ಇವರ ಮೇಲಿನ ಸುಳ್ಳು ದೂರು ಹಿಂಪಡೆಯಬೇಕು ಮತ್ತು ಇಬ್ಬರು ನೌಕರರ ಉದ್ದೇಶಪೂರ್ವಕವಾಗಿ ಬೇರೆಡೆಗೆ ವರ್ಗಾವಣೆ ಮಾಡಿದ್ದನ್ನು ರದ್ದುಗೊಳಿಸುವಂತೆ ದಲಿತ ಸೇನೆಯಿಂದ ಎನ್‌ಇಕೆಆರ‍್ಟಿಸಿ ಕಲಬುರ್ಗಿ ವಿಭಾಗಿಯ ವ್ಯವಸ್ಥಾಪಕರಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಮನವಿ ಮಾಡಿಕೊಂಡಿರುವ ದಲಿತ ಸೇನೆಯ ಮುಖಂಡರು ತಹಸೀಲ್ದಾರ ಮೂಲಕ ಮನವಿ ಸಲ್ಲಿಸಿದ್ದು.ಬಾಬು ರಾಠೋಡ ಮತ್ತು ಸಂತೋಷ ಕುಮಾರ ಎಂಬುವವರು ದಲಿತ ಸಮುದಾಯಕ್ಕೆ ಸೇರಿದ ನೌಕರರಾಗಿದ್ದು,ಈ ಇಬ್ಬರು ಇದುವರೆಗೆ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಬಂದಿದ್ದಾರೆ.

Contact Your\'s Advertisement; 9902492681

ಇಲ್ಲಿಯ ಟ್ರಾಫಿಕ್ ಇನ್ಸ್ಪೇಕ್ಟರ್ ಗಿರೀಶ ಕುಮಟಳ್ಳಿಯವರು ಚಾಲಕರು ಮತ್ತು ನಿರ್ವಾಹಕರು ಲಂಚ ಕೊಡಬೇಕೆಂದು ಕೇಳುತ್ತಾರೆ ಎಂದು ನೇರವಾಗಿ ಆರೋಪಿಸಿ,ಇದನ್ನು ವಿರೋಧಿಸಿದ್ದರಿಂದ ಈ ಇಬ್ಬರು ನೌಕರರನ್ನು ಯಾದಗಿರಿ ವಿಭಾಗಿಯ ನಿಯಂತ್ರಣಾಧಿಕಾರಿ, ಡಿಪೋ ಮ್ಯಾನೆಜರ್ ಹಾಗು ಗಿರೀಶ ಕುಮಟಳ್ಳಿ ಸೇರಿ ಇವರ ಮೇಲೆ ಸುಳ್ಳು ದೂರು ನೀಡಿ ತೊಂದರೆ ನೀಡುತ್ತಿದ್ದಾರೆ.

ಕೂಡಲೆ ಈ ದೂರನ್ನು ವಾಪಸ್ಸು ಪಡೆಯಬೇಕು ಮತ್ತು ಉದ್ದೇಶಪೂರ್ವಕವಾಗಿ ಇವರನ್ನು ಬಳ್ಳಾರಿ ಮತ್ತು ಹೊಸಪೇಟೆ ಬಸ್ ಡಿಪೋಗಳಿಗೆ ವರ್ಗಾವಣೆ ಮಾಡಲಾಗಿದೆ.ಇವರ ವರ್ಗಾವಣೆಯನ್ನು ರದ್ದು ಮಾಡಿ ನ್ಯಾಯ ಒದಗಿಸಬೇಕು ಇಲ್ಲವಾದರೆ ಇದೇ ತಿಂಗಳ ೩೦ನೇ ತಾರೀಖಿನಿಂದ ಬಸ್ ಡಿಪೋ ಮುಂದೆ ಸತ್ಯಾಗ್ರಹ ಆರಂಭಿಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here