ಕಲಬುರಗಿ – ಕಲಬುರಗಿಯ ಸಮಾನ ಮನಸ್ಕರ ತಂಡದಿಂದ ಇತಿಹಾಸ ಹಿನ್ನೆಲೆ ದೇವಸ್ಥಾನಗಳಲ್ಲಿ ಒಂದಾದ ಶಹಾಪುರ ತಾಲೂಕಿನ ಶಿರವಾಳದಲ್ಲಿರುವ ಶ್ರೀ ಸಿದ್ದಲಿಂಗೇಶ್ವರ ಶ್ರೀಗಳ ಗುರುಗಳಾದ ಜ್ಞಾನೇಶ್ವರ ದೇವಸ್ಥಾನದಲ್ಲಿ ಜನವರಿ 30 ರಂದು ಮೂರನೇ ಹಂತದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.
ಇತಿಹಾಸ ಹಿನ್ನೆಲೆ ಇರುವ ದೇವಸ್ಥಾನಗಳು ನಶಿಸಿ ಹೋಗುತ್ತಿರುವ ಹಿನ್ನಲೆ ಅವಗಳ ಉಳಿವಿಕೆಗಾಗಿ ಹೊರಡುವುದು ನಮ್ಮ ಯುವ ಪೀಳಿಗೆ ಕರ್ತವ್ಯವಾಗಿದೆ. ಹೀಗಾಗಿ ಶ್ರಮದಾನ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಸ್ವಚ್ಛತೆಗೊಳಿಸುವ ಮೂಲಕ ಗತ ವೈಭವವನ್ನು ಮಾರುಕಳಿಸುವಂತೆ ಮಾಡಲು ಯುವ ಪೀಳಿಗೆ ಕೈಜೋಡಿಸಿ ಎಂದು ಅವರು ಕೊರಿದ್ದಾರೆ.
ಶಹಾಪುರ ತಾಲೂಕಿನ ಶಿರವಾಳ ಗ್ರಾಮಕ್ಕೆ ಜ.30 ಬೆಳಗ್ಗೆ 6.00 ಗಂಟೆಗೆ ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಿಂದ ಬಸ್ ಹೊರಡಲಿದೆ. ಸ್ವಯಂಸೇವಕರಾಗಿ ಬರಲಿಚ್ಚಿಸುವರು ಮೊಬೈಲ್ ಸಂಖ್ಯೆ 9742859856 ಹಾಗೂ 9972731221ಗೆ ಕರೆ ಮಾಡಿ ಸ್ವಯಂಸೇವಕರಾಗಿ ಸೇರಬಹುದು ಎಂದು ತಂಡವು ಕೋರಿದೆ.