ವಿಶ್ವಾಸದ್ರೋಹ ದಿನ: ಕೃಷಿ ಮಸೂದೆ ರದ್ದಾಗಿಸಲು ನಕಾರ: ಆರ್‌ಕೆಎಸ್ ಆಕ್ರೋಶ

0
5

ವಾಡಿ: ಜಾರಿಗೊಳಿಸಲು ಸಜ್ಜಾಗಿದ್ದ ಮೂರು ಕರಾಳ ಕೃಷಿ ಕಾಯ್ದೆಗಳನ್ನು ರೈತರ ಹೋರಾಟದ ಪರಿಣಾಮವಾಗಿ ರದ್ದುಪಡಿಸುವ ಭರವಸೆ ನೀಡಿದ್ದ ಕೇಂದ್ರ ಬಿಜೆಪಿ ಸರ್ಕಾರ, ಈಗ ಮಾತು ತಪ್ಪುತ್ತಿದೆ. ಆ ಮೂಲಕ ದೇಶದ ರೈತರಿಗೆ ವಿಶ್ವಾಸದ್ರೋಹ ಎಸಗುತ್ತಿದೆ ಎಂದು ಆರೋಪಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್‌ಕೆಎಸ್) ಕಾರ್ಯಕರ್ತರು ಸೋಮವಾರ ಹಳಕರ್ಟಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಅಖಿಲ ಭಾರತ ಮಟ್ಟದ ವಿಶ್ವಾಸದ್ರೋಹ ದಿನ ಆಚರಣೆಯನ್ನು ಬೆಂಬಲಿಸಿ ರೈತರೊಂದಿಗೆ ಸಾಂಕೇತಿಕ ಪ್ರತಿಭಟನೆ ನಡೆಸುವ ಮೂಲಕ ಗ್ರಾಮದ ರೈತರು, ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಗ್ರಾಪಂ ಪಿಡಿಒ ರಾಚಯ್ಯಸ್ವಾಮಿ ಅವರಿಗೆ ಸಲ್ಲಿಸಿದರು. ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯುವುದಾಗಿ ಮಾತು ಕೊಟ್ಟಿದ್ದ ಪ್ರಧಾನಿ ಮೋದಿ, ಯಾವೂದೇ ಭರವಸೆ ಈಡೇರಿಸದೆ ಈಗ ಉಲ್ಟಾ ಹೊಡೆದಿದ್ದಾರೆ. ಇದರಿಂದ ಮತ್ತೊಮ್ಮೆ ದೇಶದ ರೈತರಿಗೆ ವಂಚನೆಯಾಗಿದೆ. ಸರ್ಕಾರದ ಮಾತು ಮತ್ತು ಕಾರ್ಯಗಳ ನಡುವಿನ ವ್ಯತ್ಯಾಸವು ಅವರ ನಯವಂಚಕತವನ್ನು ಬಯಲಿಗೆಳೆದಿದೆ ಎಂದು ದೂರಿದರು.

Contact Your\'s Advertisement; 9902492681

ಚಳುವಳಿಯ ಸಂದರ್ಭದಲ್ಲಿ ರೈತರ ಮೇಲೆ ದಾಖಲಿಸಲಾದ ಪ್ರಕರಣಗಳನ್ನು ಕೈಬಿಡಲಾಗುವುದು ಎಂದಿದ್ದರು. ಅದನ್ನು ಈಗ ಸರ್ಕಾರ ಮರೆತಿದೆ. ಪ್ರಕರಣವನ್ನು ಹಿಂಪಡೆಯಲು ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ಸರ್ಕಾರಗಳು ಒಪ್ಪಿಗೆ ನೀಡಿವೆ. ದೆಹಲಿ ಸೇರಿದಂತೆ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಬೆಂಬಲಿಗರ ವಿರುದ್ಧ ದಾಖಲಾದ ಎಲ್ಲಾ ಆಂದೋಲನಾ ಸಂಬಂಧಿತ ಪ್ರಕರಣಗಳನ್ನು ಹಿಂಪಡೆಯಲು ಭಾರತ ಸರ್ಕಾರದ ಸಂಬಂಧಿತ ಇಲಾಖೆಗಳು ಮತ್ತು ಏಜನ್ಸಿಗಳು ಒಪ್ಪಿಕೊಂಡಿವೆ.

ವಾಸ್ತವವೇನೆಂದರೆ, ಕೇಂದ್ರ ಸರ್ಕಾರವು ಮಧ್ಯಪ್ರದೇಶ, ಉತ್ತರಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಸರ್ಕಾರಗಳು ಆಂದೋಲನದ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವ ಭರವಸೆಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಆರ್‌ಕೆಎಸ್ ರೈತ ಸಂಘದ ಸಂಚಾಲಕ ಶಿವುಕುಮಾರ ಆಂದೋಲಾ, ಕೂಡಲೇ ಮೂರು ಕರಾಳ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ಕಾನೂನಾತ್ಮಕವಾಗಿ ಅಂಗೀಕಾರವಗಬೇಕು.

ಹೋರಾಟದಲ್ಲಿ ಪಾಲ್ಗೊಗೊಂಡ ರೈತರ ಮೇಲಿನ ಪ್ರಕರಣಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಸರ್ಕಾರ ರೈತರ ಈ ಕೂಗಿಗೆ ಸ್ಪಂಧಿಸದಿದ್ದರೆ ಮತ್ತೆ ರೈತರ ಹೋರಾಟ ಭುಗಿಲೇಳಲಿದೆ ಎಂದು ಎಚ್ಚರಿಕೆ ನೀಡಿದರು. ಮುಖಂಡರಾದ ಚೌಡಪ್ಪ ಗಂಜಿ, ದೊಡ್ಡಪ್ಪ ಹೊಸೂರ, ಅಯ್ಯಪ್ಪ ಹುಳಗೋಳ, ಭೀಮು ಮಾಟ್ನಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here