ಹಾವನೂರಿನ ಪ್ರತಿಭೆಗಳು ಬೆಂಗಳೂರಿನಲ್ಲಿ ಘರ್ಜಿಸಬೇಕು: ಹೊಸಮನಿ

0
33

ಅಫಜಲಪುರ: ತಾಲೂಕಿನ ಹಾವನೂರಿನಲ್ಲಿ ರಂಗಾಂತರಂಗ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಾಟಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾವಿತ್ರಿಯ ಸವಾಲು ಎಂಬ ಹಾಸ್ಯಭರಿತ ನಾಟಕ ಮತ್ತು ಸ್ವಾಭಿಮಾನಿ ಎಂಬ ಶಿಕ್ಷಣ ಕುರಿತಾದ ಅರಿವು ಮೂಡಿಸುವ ನಾಟಕಗಳನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಕಲಾವಿದ ಲಕ್ಷ್ಮಿಕಾಂತ ಪಿ. ಹೊಸಮನಿ ಅವರು ಮಾತನಾಡುತ್ತಾ ನಮ್ಮ ಊರಿನಲ್ಲಿ ಪ್ರತಿವರ್ಷವೂ ನಾಟಕೋತ್ಸವವನ್ನು ಏರ್ಪಡಿಸಲಾಗಿರುತ್ತದೆ ಇಲ್ಲಿನ ಹಲವಾರು ಪ್ರತಿಭೆಗಳು ನಟಿಸುತ್ತಿದ್ದು ನಮ್ಮ ಗ್ರಾಮ ರಾಜ್ಯಕ್ಕೆ ಮಾದರಿಯಾಗಬೇಕು, ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಶ್ರಮಿಸುತ್ತೇವೆ ಇಲ್ಲಿನ ಪ್ರತಿಭೆಗಳು ಬೆಂಗಳೂರಿನಲ್ಲಿ ಘರ್ಜಿಸಬೇಕೆಂದು ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಎಸ್ ಬಿ ಹರಿಕೃಷ್ಣ, ಗೋವಿಂದ ವಿ ಭಟ್, ಬಸವರಾಜಿ ಮಾಲಿಪಾಟೀಲ, ವಿಜಯಕುಮಾರ ಸಾವಳಗಿ, ನಿಂಗಪ್ಪ ಪೂಜಾರಿ, ಮಹಾರಾಜ ಕೋರಬಾ, ನಿಂಗಪ್ಪ ಟಕ್ಕಳಕಿ, ವಿನೋದ ಚೌಹಾಣ, ಹೈಯ್ಯಾಳ ಗುನ್ಯಾಪೂರ, ಅಭಯ ಪ್ರಕಾಶ, ಮನಮೋಹನ ಬಿ. ಸಾಗರ ಮಲ್ಲಿಕಾರ್ಜುನ ಎಸ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here